ಪೊಕ್ಸೋ ಪ್ರಕರಣದ ವಾರಂಟ್ ಆರೋಪಿಯ ಬಂಧನ

0

ಪುತ್ತೂರು:ಪೊಕ್ಸೋ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯ ವಾರಂಟ್ ಆರೋಪಿಯೊಬ್ಬರನ್ನು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಬಲ್ನಾಡು ಗ್ರಾಮದ ಸಾರ್ಯಬೀಡು ನಿವಾಸಿ ಬಾಬ ಪ್ರಕಾಶ್ ಶೆಟ್ಟಿ ಎಂಬವರು ಬಂಧಿತ ಆರೋಪಿ.2022ರಲ್ಲಿ ಪೊಕ್ಸೋ ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯು ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದರಿಂದ ನ್ಯಾಯಾಲಯ ವಾರಂಟ್ ಜಾರಿ ಮಾಡಿತ್ತು.

ಸಂಪ್ಯ ಪೊಲೀಸ್ ಠಾಣೆಯ ನಿರೀಕ್ಷಕ ಮಂಜುನಾಥ್ ಎಮ್ ಮತ್ತು ಉಪನಿರೀಕ್ಷಕ ಶ್ರೀನಾಥ್ ರೆಡ್ಡಿಯವರ ಮಾರ್ಗದರ್ಶನದಲ್ಲಿ ಸಿಬ್ಬಂದಿಗಳಾದ ಹರೀಶ್, ಪ್ರವೀಣ್, ಅದ್ರಾಮ ಮತ್ತು ಶಿವಾನಂದ ಅವರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

LEAVE A REPLY

Please enter your comment!
Please enter your name here