ಸಂಪ್ಯ ಠಾಣಾ ಪ್ರಥಮ ಇನ್ಸ್‌ಪೆಕ್ಟರ್ ಆಗಿ ಮಂಜುನಾಥ ಎಂ.

0

ಪುತ್ತೂರು:ಮೇಲ್ದರ್ಜೆಗೆ ಏರಿದ ಸಂಪ್ಯದ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಪ್ರಥಮ ಇನ್ಸ್‌ಪೆಕ್ಟರ್ ಆಗಿ ಮಂಜುನಾಥ ಎಂ.ರವರು ಅಧಿಕಾರ ಸ್ವೀಕರಿಸಿದ್ದಾರೆ.

ಬೆಂಗಳೂರು ನಿವಾಸಿಯಾಗಿರುವ ಮಂಜುನಾಥರವರು ಬೆಂಗಳೂರು ಹಳಸೂರು ಠಾಣೆಯಿಂದ ವರ್ಗಾವಣೆಗೊಂಡಿರುತ್ತಾರೆ.

2003 ಬ್ಯಾಚ್‌ರವರಾಗಿರುವ ಮಂಜುನಾಥ ಎಂ.ರವರು ಬೆಂಗಳೂರು, ಮಹಾದೇವನಹಳ್ಳಿ, ಸದಾಶಿವನಗರ, ದೇವನಹಳ್ಳಿ, ವಿಜಯ ನಗರ ಠಾಣೆಗಳಲ್ಲಿ ವೃತ್ತ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸಿದ್ದು ಇದೀಗ ಕರ್ನಾಟಕ ವಿಧಾನಸಭಾ ಚುನಾವಣೆ 2023ರ ಹಿನ್ನೆಲೆಯಲ್ಲಿ ಭಾರತ ಚುನವಣಾ ಆಯೋಗದ ಮಾರ್ಗಸೂಚಿ ಅನ್ವಯ ಖಾಲಿ ಇರುವ ಹುದ್ದೆಗಳಿಗೆ ಸಂಬಂಧಪಟ್ಟ ಅಧಿಕಾರಿಗಳನ್ನು, ಸ್ಥಳ ನಿಯುಕ್ತಿಗೊಳಿಸಿ, ವರ್ಗಾಯಿಸಿ ಪೊಲೀಸ್ ಇಲಾಖೆ ಆದೇಶಿಸಿದೆ.

LEAVE A REPLY

Please enter your comment!
Please enter your name here