ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ನವೀನ್ ಭಂಡಾರಿ ನೇತ್ರತ್ವದಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರ

0

ಪುತ್ತೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಮಾಜಿ ಪ್ರಧಾನ ಕಾರ್ಯದರ್ಶಿ, ಆರ್ ಬಿ.ಐ ಮಾಜಿ ನಿರ್ದೇಶಕ ಅಗರಿ ನವೀನ್ ಭಂಡಾರಿ ರವರ ನೇತೃತ್ವದಲ್ಲಿ ಎ.26 ರಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈರವರ ಪರವಾಗಿ ಕ್ಷೇತ್ರದ ಕೊಡಿಪ್ಪಾಡಿ, ಪುತ್ತೂರು ನಗರ ಹಾಗೂ ಸರ್ವೆ ಪ್ರದೇಶದಲ್ಲಿ ಮತದಾರರನ್ನು , ಪಕ್ಷದ ಮುಖಂಡರುಗಳನ್ನು ಭೇಟಿ ಮಾಡಿದರು.

ಪುತ್ತೂರು ಕ್ಷೇತ್ರದ ಉಸ್ತುವಾರಿಯಾಗಿರುವ ಹರಿಯಾಣ ರಾಜ್ಯದ ಶಾಸಕ ದೀರಜ್ ಶರ್ಮ , ಕಾಂಗ್ರೆಸ್ ಮುಖಂಡರುಗಳಾದ ಶಿವನಾಥ ರೈ ಮೇಗಿನಗುತ್ತು, ನೂರುದ್ದೀನ್ ಸಾಲ್ಮರ ಸಹಿತ ಅನೇಕ ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here