ಪುತ್ತೂರು: ಕಾಂಗ್ರೆಸ್‌ ತೊರೆದು ಜೆಡಿಎಸ್‌ ಗೆ ಸೇರ್ಪಡೆ

0

ಪುತ್ತೂರು :ಪುತ್ತೂರು ಜೆಡಿಎಸ್ ವಿಧಾನಸಭಾ ಚುನಾವಣಾ ಕಚೇರಿಯಲ್ಲಿ ಕೆಮ್ಮಾಯಿಯ ಕಾಂಗ್ರೆಸ್ ಕಾರ್ಯಕರ್ತರಾದ ಅರ್ಷದ್ ಮತ್ತು ಅಷ್ಪಕ್ ಜೆಡಿಎಸ್ ಸಿದ್ದಾಂತವನ್ನು ಒಪ್ಪಿಕೊಂಡು ಮುಖಂಡರಾದ ಐಸಿ ಕೈಲಾಶ್ ಗೌಡ , ಅಭ್ಯರ್ಥಿ ದಿವ್ಯ ಪ್ರಭಾ ಗೌಡ, ಪ್ರಭಾಕರ್ ಸಾಲ್ಯಾನ್, ಮಹಾವೀರ ಜೈನ್, ಶರೀಫ್ ಸಾರಪುಣಿ, ಅಬ್ದುಲ್ ಕುಂಞಿ , ಪ್ರಿಯ ಸಾಲಿಯಾನ್ ಮತ್ತಿತರರ ಉಪಸ್ಥಿತಿಯಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ಮಾತನಾಡಿದ ಅಭ್ಯರ್ಥಿ ದಿವ್ಯಪ್ರಭಾ ಗೌಡ, ಪಕ್ಷ ತೊರೆದು ಬೇರೆ ಪಕ್ಷಕ್ಕೆ ಸೇರ್ಪಡೆಯಾಗುವುದು ಮಾಮೂಲಿಯಾಗಿದೆ. ಆದರೆ ಈಗಿನ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ ಕಾರ್ಯ ವೈಖರಿ ಜನರಿಗೆ ಬೇಸತ್ತು ಹೋಗಿದೆ. ಕುಮಾರಸ್ವಾಮಿಯ ಪಂಚರತ್ನ ಯೋಜನೆಯು ಜನಗರಿಗೆ ಭರವಸೆ ಮೂಡಿಸಿದೆ ಇದರಿಂದಾಗಿ ಬೇರೆ ಪಕ್ಷದ ಕಾರ್ಯಕರ್ತರು ಜೆಡಿಎಸ್ ಪಕ್ಷಕ್ಕೆ ಒಲವು ತೋರಿತ್ತಿದ್ದಾರೆ ಎಂದರು.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here