ಸಿದ್ದಗಂಗಾ ಶ್ರೀಗಳಿಂದ ಆಶೀರ್ವಾದ ಪಡೆದ ಅರುಣ್ ಕುಮಾರ್ ಪುತ್ತಿಲ-ವಿದ್ಯಾರ್ಥಿಗಳಿಗೆ ಹಿಂದುತ್ವದ ವಿಚಾರಧಾರೆಯೆರೆಯಲು ಮಠಕ್ಕೆ ಇನ್ನೊಮ್ಮೆ ಬರುವಂತೆ ಸೂಚನೆ

0

ಪುತ್ತೂರು: ತ್ರಿವಿಧ ದಾಸೋಹಿ ಮಠ ಎಂದೇ ಖ್ಯಾತವಾದ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ಅರುಣ್ ಕುಮಾರ್ ಪುತ್ತಿಲ ಅವರು ನೀಡಿ ಲಿಂಗೈಕ್ಯರಾದ ಪರಮಪೂಜ್ಯ ಡಾ. ಶ್ರೀ ಶಿವಕುಮಾರ ಮಹಾಸ್ವಾಮಿಗಳವರ ಗದ್ದುಗೆಯಲ್ಲಿ ಪ್ರಾರ್ಥನೆ ಸಲ್ಲಿಸಿದರು.


ಸಿದ್ದಗಂಗಾ ಮಠದ ಅಧ್ಯಕ್ಷ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳವರ ಹಾಗೂ ಕಿರಿಯ ಶ್ರೀ ಶಿವಸಿದ್ಧೇಶ್ವರ ಸ್ವಾಮಿಗಳವರ ಆಶೀರ್ವಾದ ಪಡೆದರು. ಈ ಸಂದರ್ಭ ಶ್ರೀಗಳು ಅರುಣ್ ಕುಮಾರ್ ಪುತ್ತಿಲರವರ ಜೊತೆ ರಾಜಕೀಯ ಹಾಗೂ ಹಿಂದೂತ್ವದ ವಿಚಾರಗಳ ಬಗ್ಗೆ ಮಾತುಕತೆ ನಡೆಸಿದರು.
ಹಿಂದುತ್ವದ ವಿಚಾರಧಾರೆಯ ಬಗ್ಗೆ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಲು ಇನ್ನೊಮ್ಮೆ ಮಠಕ್ಕೆ ಆಗಮಿಸಬೇಕೆಂದು ಪುತ್ತಿಲರಲ್ಲಿ ಮಠದ ಆಡಳಿತ ಮಂಡಳಿ ತಿಳಿಸಿದೆ.

LEAVE A REPLY

Please enter your comment!
Please enter your name here