ಉಪ್ಪಿನಂಗಡಿ ಜೇಸಿಐಗೆ ಪ್ರಶಸ್ತಿ

0

ಉಪ್ಪಿನಂಗಡಿ: ಜೇಸಿಐಯ ಗುರಿ- ಉದ್ದೇಶಗಳನ್ನು ಈಡೇರಿಸಲು ಶ್ರಮಿಸಿದ್ದಕ್ಕಾಗಿ ಜೇಸಿಐ ಉಪ್ಪಿನಂಗಡಿ ಘಟಕದ ಅಧ್ಯಕ್ಷ ಶೇಖರ ಗೌಂಡತ್ತಿಗೆ ಎ’ ಪ್ರಾಂತ್ಯದ ರನ್ನರ್ ಆಫ್ಅತ್ಯುತ್ತಮ ಘಟಕಾಧ್ಯಕ್ಷ ಪ್ರಶಸ್ತಿ’ ಮತ್ತು ರನ್ನರ್ ಆಫ್ ಸ್ಪೆಷಲ್ ಪ್ರಾಜೆಕ್ಟ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.


ಜೇಸಿಐ ನೇತ್ರಾವತಿ ಜೋಡುಮಾರ್ಗ ಘಟಕದ ನೇತೃತ್ವದಲ್ಲಿ ನಡೆದ ವಲಯ 15ರ ಮಧ್ಯಂತರ ಸಮ್ಮೇಳನ `ನಿಲುಮೆ’ಯಲ್ಲಿ ಈ ಪುರಸ್ಕಾರ ನೀಡಲಾಯಿತು. ಈ ಸಂದರ್ಭ ಉತ್ತಮ ಸಾಧನೆ ತೋರಿದ ಜೇಸಿಐಯ ವಿವಿಧ ಘಟಕಗಳಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.


ಜೇಸಿಐ ವಲಯಾಧ್ಯಕ್ಷ ಪುರುಷೋತ್ತಮ ಶೆಟ್ಟಿ, ನಿಕಟ ಪೂರ್ವ ವಲಯಾಧ್ಯಕ್ಷ ರೋಯನ್ ಉದಯ್ ಕ್ರಾಸ್ತ, ವಲಯ ಉಪಾಧ್ಯಕ್ಷ ದೇವರಾಜ್ ಕುತ್ಪಾಜೆ ಮತ್ತು ಇತರ ವಲಯ ಉಪಾಧ್ಯಕ್ಷರು ಮತ್ತು ವಲಯ ಆಡಳಿತ ಮಂಡಳಿಯ ಉಪಸ್ಥಿತಿಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ಜೇಸಿಐಯ ಹರೀಶ್ ನಟ್ಟಿಬೈಲು, ಶಶಿಧರ ನೆಕ್ಕಿಲಾಡಿ, ಮಹೇಶ್ ಖಂಡಿಗ, ದಿವಾಕರ ಶಾಂತಿನಗರ, ಸುರೇಶ್, ಸುಮನ್ ಬಜತ್ತೂರು, ತುಷಾರ್ ಮರುವೇಲ್ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here