ಬಪ್ಪಳಿಗೆಯಲ್ಲಿ ಬಹುಕಾಲದ ಬೇಡಿಕೆ ಈಡೇರಿಸಿದ ನಗರಸಭಾ ಸದಸ್ಯ ಭಾಮಿ ಅಶೋಕ್ ಶೆಣೈ

0

ಪುತ್ತೂರು:ಮೂಲಸೌಕರ್ಯದಲ್ಲಿ ಒಂದಾದ ಮಣ್ಣುರಸ್ತೆಗೆ ಇಂಟರ್‌ಲಾಕ್ ಮತ್ತು ಕಾಂಕ್ರೀಟ್ ಮಾಡಿಸುವ ಮೂಲಕ ಬಪ್ಪಳಿಗೆಯಲ್ಲಿ ಬಹುಕಾಲದ ಬೇಡಿಕೆಯನ್ನು ನಗರಸಭಾ ಸದಸ್ಯ ಭಾಮಿ ಅಶೋಕ್ ಶೆಣೈ ಅವರು ಪೂರೈಸಿದ್ದಾರೆ ಎಂದು ಸ್ಥಳೀಯ ಫಲಾನುಭವಿ ಬಪ್ಪಳಿಗೆ ಕಿಟ್ಟಣ್ಣ ಗೌಡ ತಿಳಿಸಿದ್ದಾರೆ.

ಭಾಮಿ ಅಶೋಕ್ ಶೆಣೈ ಅವರು 2004ರಲ್ಲಿ 2ನೇ ಅವಧಿಗೆ ಪುರಸಭೆ ಸದಸ್ಯರಾಗಿದ್ದ ಸಂದರ್ಭ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ಭಂಡಾರ ಬರುವಲ್ಲಿ ಪೈಪ್ ಹಾಕಿ ಸುರಕ್ಷಿತ ದಾರಿ ಮಾಡಲಾಗಿತ್ತು. ಇದೀಗ ಮೂರನೇ ಬಾರಿ ಅವರು ನಗರಸಭಾ ಸದಸ್ಯರಾದಾಗ ಅದೇ ರಸ್ತೆಗೆ ಇಂಟರ್‌ಲಾಕ್ ಅಳವಡಿಸಿದ್ದಾರೆ. ಜೊತೆಗೆ ಅಸ್ಮಿ ಕಂಫರ್ಟ್ ಬಳಿ ಕಾಂಕ್ರೀಟ್ ರಸ್ತೆ ಮಾಡಿಸಿದ್ದಾರೆ. ಒಟ್ಟು ರೂ.5 ಲಕ್ಷ ಅನುದಾನದಲ್ಲಿ ಈ ಕಾಮಗಾರಿ ನಡೆದಿದೆ ಎಂದು ಕಿಟ್ಟಣ್ಣ ಗೌಡ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here