![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು: ಸರಕಾರಿ ಪದವಿ ಪೂರ್ವ ಕಾಲೇಜು, ಪ್ರೌಢಶಾಲಾ ವಿಭಾಗ ಕೊಂಬೆಟ್ಟು ಇಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಎನ್ ಸಿ ಸಿ ಅಧಿಕಾರಿ ಹಾಗೂ ಯೋಗ ತರಬೇತುದಾರರಾದ ಗ್ರೆಗೋರಿ ರೋನಿ ಪಾಯಸ್ ಮುಂದಾಳತ್ವದಲ್ಲಿ ಹಾಗೂ ಉಪ ಪ್ರಾಂಶುಪಾಲ ವಸಂತಮೂಲ್ಯ ಇವರ ಮಾರ್ಗದರ್ಶನದಲ್ಲಿ ಯೋಗ ದಿನವನ್ನು ಆಚರಿಸಲಾಯಿತು.
![](https://puttur.suddinews.com/wp-content/uploads/2023/06/e66d20b1-bb2a-413b-bd92-6831a38e0c10.jpg)
ಕೊಂಬೆಟ್ಟು ವಾರ್ಡಿನ ನಗರಸಭಾ ಸದಸ್ಯ ಪಿ.ಜಿ ಜಗನ್ನಿವಾಸ ರಾವ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಎಸ್.ಡಿ.ಎಂ.ಸಿ ಸದಸ್ಯ ಜಯಪ್ರಕಾಶ್, ಚನ್ನಪ್ಪ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಯೋಗ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಸಂಸ್ಥೆಯ ಶಿಕ್ಷಕರೆಲ್ಲರೂ ಪಾಲ್ಗೊಂಡಿದ್ದರು.
![](https://puttur.suddinews.com/wp-content/uploads/2023/06/2b276f83-4d51-4266-a2ec-d1a48b40e282.jpg)
![](https://puttur.suddinews.com/wp-content/uploads/2023/06/76a85559-3c8e-4bef-b204-ffde65a68fa9.jpg)