ಎಸ್‌ಡಿಪಿಐ ಸಂಸ್ಥಾಪನ ದಿನಾಚರಣೆಯ ಅಂಗವಾಗಿ ಸವಣೂರಿನಲ್ಲಿ ಧ್ವಜಾರೋಹಣ ಕಾರ್ಯಕ್ರಮ

0

ಸವಣೂರು,ಜೂ21: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಸಂಸ್ಥಾಪನ ದಿನಾಚರಣೆಯ ಅಂಗವಾಗಿ ಸವಣೂರಿನಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಸವಣೂರು ಗ್ರಾಮ ಸಮಿತಿ ಅಧ್ಯಕ್ಷರಾದ ಅಬ್ದುಲ್ ರಝಾಕ್ ಕೆನರಾ ಧ್ವಜಾರೋಹಣಗೈದರು

ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಪುತ್ತೂರು ಸಂದೇಶ ಭಾಷಣ ಮಾಡಿ ಪಕ್ಷವು 15 ವರ್ಷಗಳಲ್ಲಿ ನಡೆದು ಬಂದ ಹಾದಿಯನ್ನು  ವಿವರಿಸುತ್ತಾ  ಇನ್ನಿತರ ಎಲ್ಲಾ ರಾಜಕೀಯ ಪಕ್ಷಕ್ಕಿಂತ  ಎಸ್ ಡಿ ಪಿ ಐ 15 ವರ್ಷ ಮುನ್ನಡೆಯನ್ನು ಸಾಧಿಸಿಕೊಂಡು ಹೆಜ್ಜೆ ಹಾಕುತ್ತಾ ಇದೆ ಎಂದು ಸಾಂಧರ್ಭಿಕವಾಗಿ  ವಿವರಿಸಿದರು.

ಹಸಿವು ಮುಕ್ತ ಭಾರತ ಮತ್ತು ಭಯ ಮುಕ್ತ ಭಾರತವನ್ನು ನಿರ್ಮಿಸಲು, ಅಪಾಯದಲ್ಲಿರುವ ದೇಶದ  ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ರಕ್ಷಿಸಲು ಕಾರ್ಯಕರ್ತರು ಸಜ್ಜಾಗಬೇಕು ಎಂದು ಕರೆ ನೀಡುತ್ತಾ, ನಮ್ಮನ್ನಗಲಿದ ಕಾರ್ಯಕರ್ತರನ್ನು ಸ್ಮರಿಸುತ್ತಾ ಮುಖ್ಯ ಭಾಷಣ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಎಸ್‌ಡಿಪಿಐ ಸುಳ್ಯ ವಿಧಾನಸಭಾ ಕ್ಷೇತ್ರದ ಸಂಘಟನಾ ಕಾರ್ಯದರ್ಶಿ ಸಿದ್ದೀಕ್ ಸವಣೂರು,ಉಪಾಧ್ಯಕ್ಷ ಮತ್ತು ಗ್ರಾ.ಪಂ ಸದಸ್ಯ ಬಾಬು ಎನ್ ಸವಣೂರು,ಪ್ರಧಾನ ಕಾರ್ಯದರ್ಶಿ ಮತ್ತು ಸವಣೂರು ಗ್ರಾ.ಪಂ ಸದಸ್ಯ ರಫೀಕ್ ಎಂ.ಎ,ಮತ್ತು ಶ್ರೀಮತಿ ಚೆನ್ನು,ಸವಣೂರು ಗ್ರಾಮ ಸಮಿತಿ ಕಾರ್ಯದರ್ಶಿ  ರಫೀಕ್ ಪಣೆಮಜಲು, ಬ್ಲಾಕ್ ಕಾರ್ಯದರ್ಶಿ ಇಕ್ಬಾಲ್ ಕೆನರಾ ,ಅಬ್ದುಲ್ ರಹಿಮಾನ್ ಸರ್ವೆ ಸೇರಿದಂತೆ ಸ್ಥಳೀಯ ನಾಯಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here