ಕೆ.ಪುಷ್ಪರಾಜ ಶೆಟ್ಟಿ ಜಾನುವಾರು ಅಭಿವೃದ್ದಿ ಅಧಿಕಾರಿಯಾಗಿ ಮುಂಬಡ್ತಿ ಹೊಂದಿ ವರ್ಗಾವಣೆ

0

ಪುತ್ತೂರು: 2016ರಿಂದ ಜಾನುವಾರು ಅಧಿಕಾರಿಯಾಗಿ ಪುತ್ತೂರು ತಾಲೂಕಿನ ಪಾಣಾಜೆ ಪಶು ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕೆ.ಪುಷ್ಪರಾಜ ಶೆಟ್ಟಿ ಜಾನುವಾರು ಅಭಿವೃದ್ದಿ ಅಧಿಕಾರಿಯಾಗಿ ಮುಂಬಡ್ತಿ ಹೊಂದಿ ಸುಳ್ಯ ಪಶು ಆಸ್ಪತ್ರೆಗೆ ವರ್ಗಾವಣೆಯಾಗಿದ್ದಾರೆ. ಕೆ.ಪುಷ್ಪರಾಜ ಶೆಟ್ಟಿ 1991 ರಿಂದ 1997ರ ವರೆಗೆ ಪಶುವೈದ್ಯ ಪರೀಕ್ಷರಾಗಿ ಪ್ರಾಥಮಿಕ ಪಶುಚಿಕಿತ್ಸಾ ಕೇಂದ್ರ ಕೊಡಿಂಬಾಡಿಯಲ್ಲಿ, ಮತ್ತು 1997 ರಿಂದ 2016ರ ವರೆಗೆ ಹಿರಿಯ ಪಶುವೈದ್ಯ ಪರೀಕ್ಷಕರಾಗಿ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರ ಈಶ್ವರಮಂಗಲದಲ್ಲಿ ಸೇವೆ ಸಲ್ಲಿದ್ದರು. ಜೂ.19ರಂದು ಸುಳ್ಯದ ಪಶು ಆಸ್ಪತ್ರೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

LEAVE A REPLY

Please enter your comment!
Please enter your name here