ಕುರಿಯ ಓಟೆತ್ತಿಮಾರ್ ಪ.ಜಾತಿ ಕಾಲೋನಿಯಲ್ಲಿ ಎಸ್‌ಸಿ ಎಸ್‌ಟಿ ಕುಂದುಕೊರತೆ ಸಭೆ

0

ಪುತ್ತೂರು: ಕುರಿಯ ಗ್ರಾಮದ ಓಟೆತ್ತಿಮಾರ್ ಪ.ಜಾತಿ ಕಾಲೋನಿಯಲ್ಲಿ ಎಸ್‌ಸಿ ಎಸ್‌ಟಿ ಕುಂದು ಕೊರತೆ ಸಭೆ ನಡೆಯಿತು. ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಧನಂಜಯ ಬಿ.ಸಿ.ರವರು ಪೋಕ್ಸೋ ಕಾಯಿದೆ, ಸಾಮಾಜಿಕ ಜಾಲತಾಣ, ಸೈಬರ್ ಪ್ರಕರಣ ಹಾಗೂ ಮಕ್ಕಳ ಬಗ್ಗೆ ಮಾಹಿತಿ ನೀಡಿದರು.

ಅಪರಾಧ ದಳ ವಿಭಾಗದ ಪ್ರವೀಣ್ ರೈ, ಆರ್ಯಾಪು ಗ್ರಾಮ ಪಂಚಾಯತ್ ಸದಸ್ಯ ಯಾಕೂಬ್, ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಸಂಘದ ಅಧ್ಯಕ್ಷೆ ಕಮಲ, ಗ್ರಾ.ಪಂ.ಮಾಜಿ ಅಧ್ಯಕ್ಷೆ ಲಲಿತ, ಸುಂದರ, ರವಿ, ಯಾದವ, ಜಾನಕಿ, ಬಳ್ಳು, ಬಾಬು, ದಯಾನಂದ, ಶೀನಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು. ತಾ.ಪಂ.ಮಾಜಿ ಸದಸ್ಯ ಸಂಕಪ್ಪ ಎಂ., ಸ್ವಾಗತಿಸಿ ಕುರಿಯ ಮುಂಡೂರು ಬೀಟ್ ಪೊಲೀಸ್ ಮುನಿಯ ನಾಯ್ಕ್ ವಂದಿಸಿದರು.

LEAVE A REPLY

Please enter your comment!
Please enter your name here