ಬೆಳೆವಿಮೆ ಯೋಜನೆ-ಶಾಸಕರನ್ನು ದಡ್ಡ ಎಂದು ಹೇಳಲು ಹೋದ ಮಾಜಿ ಶಾಸಕರೇ ಶತದಡ್ಡ- ಹೆಚ್ ಮಹಮ್ಮದ್ ಆಲಿ ಆರೋಪ

0

ಪುತ್ತೂರು: ಬಿಜೆಪಿ ಸರಕಾರ ಇರುವಾಗಲೇ ಬಿಜೆಪಿ ಸರಕಾರದ ಸಮನ್ವಯ ಸಮಿತಿಯವರು ಪರಿಷ್ಕೃತ ಮಾರ್ಗಸೂಚಿಯಲ್ಲಿ ಹವಾಮಾನ ವಿಮೆ ಯೋಜನೆಗೆ ಅನುಮೋದನೆ ನೀಡಿಲ್ಲ. ತಂತ್ರಾಂಶದಲ್ಲೂ ಈ ಯೋಜನೆ ಕಾಣಿಸುತ್ತಿಲ್ಲ. ಅದನ್ನು ಬ್ಲಾಕ್ ಮಾಡಲಾಗಿದೆ. ಈ ಸಮಸ್ಯೆಗೆ ನಮ್ಮ ಶಾಸಕರು ಗೊಂದಲಕಾರಿ ಹೇಳಿಕೆ ನೀಡಿದ್ದಾರೆಂದು ಮಾಜಿ ಶಾಸಕರು ಆರೋಪ ಮಾಡುವುದು ಸರಿಯಲ್ಲ. ಶಾಸಕರನ್ನು ದಡ್ಡ ಎಂದು ಹೇಳಲು ಹೋದ ಮಾಜಿ ಶಾಸಕರೇ ಶತದಡ್ಡ ಎಂದು ಆರ್ಯಾಪು ಕೃಷಿ ಪತ್ತಿನ ಸಹಕಾರಿ ಸಂಘದ ಮತ್ತು ನಗರ ಕಾಂಗ್ರೆಸ್ ಅಧ್ಯಕ್ಷ ಹೆಚ್.ಮಹಮ್ಮದ್ ಆಲಿ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಮ್, ಮುಂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಯಾಕುಬ್ ಮುಲಾರು, ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here