ಬೆಟ್ಟಂಪಾಡಿ ಸಾರ್ವಜನಿಕ ಗಣೇಶೋತ್ಸವದ ವಿಗ್ರಹ ಮುಹೂರ್ತ

0

ಬೆಟ್ಟಂಪಾಡಿ: ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಾಲಯದ ವಠಾರದಲ್ಲಿ ನಡೆಯಲಿರುವ 38 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ವಿಗ್ರಹ ಮುಹೂರ್ತ ಕಾರ್ಯಕ್ರಮ ಜು. 9 ರಂದು ಪರ್ಲಡ್ಕ ಶಿವಪೇಟೆಯ ಏಕದಂತ ಆರ್ಟ್ ಕೇಂದ್ರದಲ್ಲಿ ನಡೆಯಿತು.

ಶಿಲ್ಪಿ ತಾರನಾಥ ಆಚಾರ್ಯ ಮುಹೂರ್ತ ನೆರವೇರಿಸಿದರು. ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಸೀತರಾಮ ಗೌಡ ಮಿತ್ತಡ್ಕ ಪ್ರಾರ್ಥಿಸಿದರು. ಸಮಿತಿಯ ಗೌರವಾಧ್ಯಕ್ಷ ಮನಮೋಹನ ರೈ ಚೆಲ್ಯಡ್ಕ, ಪ್ರಧಾನ ಕಾರ್ಯದರ್ಶಿ ಧನಂಜಯ ರೆಂಜ, ಕೋಶಾಧಿಕಾರಿ ರಂಜಿತ್ ತಲೆಪ್ಪಾಡಿ, ಸದಸ್ಯರಾದ ದುರ್ಗಾಪ್ರಸಾದ್ ಜೆ., ಸತೀಶ್ ರೈ ಮೂರ್ಕಾಜೆ, ಸತೀಶ್ ಗೌಡ ಪಾರ, ಶಿವಪ್ರಸಾದ್ ತಲೆಪ್ಪಾಡಿ, ಗಣೇಶ್ ಹೊಳ್ಳ, ಜಗದೀಶ್ ಸುವರ್ಣ, ನಾಗರಾಜ್ ಕಜೆ, ರವಿರಾಜ್ ಅಮೀನ್ ಬೆದ್ರಾಡಿ, ಉಮೇಶ್ ಮಿತ್ತಡ್ಕ, ಪ್ರವೀಣ್ ಕರ್ನಪ್ಪಾಡಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here