ದೋಳ್ಪಾಡಿ ಕುಕ್ಕುನಾಜೆ ಮನೆಗೆ ಮರ ಬಿದ್ದು ಹಾನಿಯಾದ ಘಟನಾ ಸ್ಥಳಕ್ಕೆ ಭೇಟಿ, ಪರಿಶೀಲನೆ

0

ಕಾಣಿಯೂರು: ನಿರಂತರ ಸುರಿದ ಭಾರಿ ಮಳೆಗೆ ದೋಳ್ಪಾಡಿ ಗ್ರಾಮದ ಕುಕ್ಕುನಾಜೆ ಎಂಬಲ್ಲಿ ಆನಂದ ಅವರ ಮನೆಗೆ ಮರವೊಂದು ಬಿದ್ದು ಮನೆ ಹಾನಿಯಾಗಿದ್ದು ,ಗೋಡೆ ಬಿರುಕುಗೊಂಡಿತ್ತು. ವಿದ್ಯುತ್ ಸಂಪರ್ಕವೂ ಕಡಿತಗೊಂಡಿತ್ತು. ಘಟನಾ ಸ್ಥಳಕ್ಕೆ ಕಾಣಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷ ಲಲಿತಾ ದರ್ಖಾಸ್, ಉಪಾಧ್ಯಕ್ಷ ಗಣೇಶ್ ಉದನಡ್ಕ,ಸದಸ್ಯರಾದ ದೇವಿಪ್ರಸಾದ್ ದೋಳ್ಪಾಡಿ, ಲೋಕಯ್ಯ ಪರವ ದೋಳ್ಪಾಡಿ, ಗ್ರಾ. ಪಂ.ಪಂಚಾಯತ್ ಅಭಿವೃದ್ಧಿ ಅಧಿಕಾರಿ ಎಂ ದೇವರಾಜ, ಕಾಣಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸಾಜಿದ, ಆಶಾ ಕಾರ್ಯಕರ್ತೆ ಭಾರತಿ ಕೂರೇಲು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here