ನ್ಯಾಷನಲ್ ಚಾಂಪಿಯನ್ ಶಿಪ್ ರ‍್ಯಾಲಿ-ಏಸ್ ಮೋಟಾರ‍್ಸ್ ಮ್ಹಾಲಕ ಆಕಾಶ್ ಐತಾಳ್ 2ನೇ ರನ್ನರ್ ಅಪ್

0

ಪುತ್ತೂರು:ಎಂಆರ್‌ಎಫ್ ಮೋಗ್ರಿಪ್ ವತಿಯಿಂದ ಕೊಯಂತ್ತೂರಿನಲ್ಲಿ ಜು.15 ಮತ್ತು16ರಂದು ನ್ಯಾಷನಲ್ ಚಾಂಪಿಯನ್ ಶಿಪ್ ಬೈಕ್ ರ‍್ಯಾಲಿಯಲ್ಲಿ ಬೊಳುವಾರು ಏಸ್ ಮೋಟಾರ‍್ಸ್ ಮ್ಹಾಲಕ ಆಕಾಶ್ ಐತಾಳ್ 2 ನೇ ರನ್ನರ್ ಅಪ್ ಆದರು.


200 ಕಿಲೋಮೀಟರ್ ಡರ್ಟ್‌ನ್ನು ಒಳಗೊಂಡ ರ‍್ಯಾಲಿಯಲ್ಲಿ ಭಾರತದ ವಿವಿಧ ರಾಜ್ಯಗಳಿಂದ ಸುಮಾರು 110 ಮಂದಿ ಭಾಗವಹಿಸಿದ್ದರು. ಆಕಾಶ್ ಐತಾಳ್ ತಂಡವನ್ನು ಪ್ರತಿನಿಧಿಸುವ ವಾಮ್ಸಿ ಮೇರ್ಲಾ 400 ಸಿಸಿ ವಿಭಾಗದಲ್ಲಿ 2 ನೇ ರನ್ನರ್ ಅಪ್ ಆದರು. ಕಳೆದ ಮಾರ್ಚ್‌ನಲ್ಲಿ ಸಜೋಬಾ ರ‍್ಯಾಲಿಯಲ್ಲಿ ನಡೆದ ಅಪಘಾತದಿಂದಾಗಿ ಆಕಾಶ್ ಐತಾಳ್ ಮೊಣಕಾಲು ಮುರಿದುಕೊಂಡು ಚೇತರಿಕೆಯಾದ ಬಳಿಕ 4 ತಿಂಗಳ ನಂತರ ರೈಡಿಂಗ್ ಸ್ಪರ್ಧಾತ್ಮಕ ರ‍್ಯಾಲಿಯನ್ನು ಆಕಾಶ್ ಐತಾಳ್ ಇತರ ರೈಡರ್‌ಗಳಿಗೆ ಕಠಿಣ ಸ್ಪರ್ಧೆಯನ್ನು ನೀಡಿದರು. ಇವರು ಆಗಸ್ಟ್‌ನಲ್ಲಿ ಚಂಡೀಗಢದಲ್ಲಿ ರಾಷ್ಟ್ರೀಯ ಸ್ಪ್ರಿಂಟ್ ರ‍್ಯಾಲಿಯಲ್ಲಿ ಭಾಗವಹಿಸಲಿದ್ದಾರೆ.


ಇವರು 2022ರ ನವಂಬರ್‌ನಲ್ಲಿ ಮಹಾರಾಷ್ಟ್ರದಲ್ಲಿ ನಡೆದ ನ್ಯಾಶಷನಲ್ ಸ್ಪಿಂಟ್ ಕ್ಯಾಲಿಯಲ್ಲಿ ಆರು ವಿಭಾಗದಲ್ಲಿ ಚಾಂಪಿಯನ್ ಶಿಪ್ ಹಾಗೂ ಡಿಸೆಂಬರ್‌ನಲ್ಲಿ ಗೋವಾದಲ್ಲಿ ನಡೆದ ಕ್ಯಾಲಿಯಲ್ಲಿಯೂ ನ್ಯಾಷನಲ್ ಚಾಂಪಿಯನ್ ಆಗಿದ್ದರು. ಫೆಬ್ರವರಿಯಲ್ಲಿ ಬೆಂಗಳೂರು- ಚಿತ್ರದುರ್ಗಾದ ಮಧ್ಯೆಯ 1250 ಕಿ.ಮೀ ದೂರದ ದಕ್ಷಿಣ್ ಡೇರ್ ಚಾಂಪಿಯನ್ ಶಿಪ್ ಬೈಕ್ ಕ್ಯಾಲಿಯಲ್ಲಿ 400ಸಿಸಿ ವಿಭಾಗದಲ್ಲಿ ಚಾಂಪಿಯನ್ ಆಗಿದ್ದರು. ಅಲ್ಲದೆ ಚಂಡೀಗಡದಲ್ಲಿ ನಡೆದ ಸಜೋಬಾ ಚಾಂಪಿಯನ್ ಶಿಪ್ ಬೈಕ್ ಕ್ಯಾಲಿಯಲ್ಲಿ ವಿದೇಶಿ ಬೈಕ್ ವಿಭಾಗದಲ್ಲಿ ಸೆಕೆಂಡ್ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದರು.

LEAVE A REPLY

Please enter your comment!
Please enter your name here