ನೇರಳಕಟ್ಟೆ: ಮಾಣಿ – ಮೈಸೂರು ಹೆದ್ದಾರಿಗೆ ಬಿದ್ದ ಮರ, ವಿದ್ಯುತ್ ಕಂಬ ತೆರವು – ಸುಗಮ ಸಂಚಾರ ಆರಂಭ

0

ವಿಟ್ಲ: ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ನೇರಳಕಟ್ಟೆ ಬಳಿ ಮರವೊಂದು ರಸ್ತೆಗಡ್ಡವಾಗಿ ಬಿದ್ದ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ತೊಡಕಾಗಿದ್ದು, ಆ ಬಳಿಕದ ಬೆಳವಣಿಗೆಯಲ್ಲಿ ತೆರವು ಕಾರ್ಯ ನಡೆದು ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.


ಜು.22ರಂದು ಬೆಳಗ್ಗೆ 9.45ರ ಸುಮಾರಿಗೆ ಗಾಳಿ ಮಳೆಯ ಹಿನ್ನಲೆಯಲ್ಲಿ ಹೆದ್ದಾರಿ ಬದಿಯ ಮರಗಳ ಜೊತೆಗೆ ವಿದ್ಯುತ್ ಕಂಬಗಳು ನೆಲಕ್ಕುರುಳಿತ್ತು. ಘಟನೆಯಿಂದಾಗಿ
ರಸ್ತೆಯ ಎರಡೂ ಕಡೆಗಳಲ್ಲಿ ವಾಹನಗಲು ಸಾಲುಗಟ್ಟಿ ನಿಂತಿದ್ದು, ಸಂಚಾರಕ್ಕೆ ತೊಡಕಾಗಿತ್ತು. ಕೆಲವೊಂದು ವಾಹನಗಳು ಕೊಡಾಜೆ ವೀರಕಂಬ ಮೂಲಕ ಕಲ್ಲಡ್ಕ ತಲುಪಿ ಸಂಚಾರ ನಡೆಸಿದರೆ ಕೆಲವೊಂದು ವಾಹನಗಳು ಕಬಕ ವಿಟ್ಲ ಮೂಲಕ ಕಲ್ಲಡ್ಕ ತಲುಪಿ ಸಂಚಾರ ನಡೆಸಿವೆ.


ಸ್ಥಳೀಯ ಗ್ರಾಮ ಪಂಚಾಯತ್ ಸಿಬ್ಬಂದಿಗಳು, ವಿದ್ಯುತ್ ಇಲಾಖೆ, ಅರಣ್ಯ ಇಲಾಖೆ, ವಿಟ್ಲ ಠಾಣಾ ಪೊಲೀಸರ ತಂಡ ಸ್ಥಳಕ್ಕೆ ತೆರಳಿ ಸ್ಥಳೀಯರೊಂದಿಗೆ ಸೇರಿಕೊಂಡು ತೆರವು ಕಾರ್ಯಾಚರಣೆ ನಡೆಸಿ ಮರ ತೆರವು ಕಾರ್ಯ ನಡೆಸಿದ್ದು, ಇದೀಗ ಹೆದ್ದಾರಿ ವಾಹನ ಸಂಚಾರಕ್ಕೆ ಮುಕ್ತವಾಗಿದೆ.

LEAVE A REPLY

Please enter your comment!
Please enter your name here