ಸರ್ವೆ ಷಣ್ಮುಖ ಯುವಕ ಮಂಡಲದಿಂದ ಭಕ್ತಕೋಡಿ ಬಸ್ ತಂಗುದಾಣ ಸ್ವಚ್ಛತೆ

0

ಪುತ್ತೂರು: ಸರ್ವೆ ಶ್ರೀ ಷಣ್ಮುಖ ಯುವಕ ಮಂಡಲದ ವತಿಯಿಂದ ಭಕ್ತಕೋಡಿ ಬಸ್ ತಂಗುದಾಣ ಸ್ವಚ್ಚಗೊಳಿಸಲಾಯಿತು.
ಬಸ್ಸು ತಂಗುದಾಣದ ಒಳಾಂಗಣ ಮತ್ತು ಹೊರಾಂಗಣ ಸ್ವಚ್ಚಗೊಳಿಸಿ ಸುತ್ತಮುತ್ತಲಿನ ಗಿಡಗಂಟಿಗಳನ್ನು ತೆರವುಗೊಳಿಸಲಾಯಿತು. ಬಸ್ಸು ತಂಗುದಾಣದ ಮೇಲ್ಛಾವಣಿಯನ್ನು ಶುಚಿಗೊಳಿಸಿ ಸುಣ್ಣ ಬಳಿಯಲಾಯಿತು.

ಅಧ್ಯಕ್ಷ ಗೌತಮ್‌ರಾಜ್ ಕರುಂಬಾರು, ಪ್ರಧಾನ ಕಾರ್ಯದರ್ಶಿ ಮನೋಜ್ ಸುವರ್ಣ ಸೊರಕೆ, ಉಪಾಧ್ಯಕ್ಷ ಅಶೋಕ್ ಎಸ್.ಡಿ, ಕ್ರೀಡಾ ಕಾರ್ಯದರ್ಶಿ ಕಿರಣ್ ಎಸ್.ಡಿ, ಸಾಂಸ್ಕೃತಿಕ ಕಾರ್ಯದರ್ಶಿ ನಂದನ್ ಕುಮಾರ್, ಗೌರವ ಸಲಹೆಗಾರರಾದ ಶಶಿಧರ್ ಎಸ್.ಡಿ, ಪರಿಸರ ಹಾಗೂ ಕ್ರೀಡಾ ಕಾರ್ಯದರ್ಶಿಯಾಗಿ ನಾಗೇಶ್ ಪಟ್ಟೆಮಜಲು, ಕಾರ್ಯಕಾರಿ ಸಮಿತಿ ಸದಸ್ಯರಾದ ಸುಬ್ರಹ್ಮಣ್ಯ ಕರುಂಬಾರು, ಎಸ್.ಎಂ. ಶರೀಫ್, ತಿಲಕ್‌ರಾಜ್ ಕರುಂಬಾರು, ರಾಜೇಶ್ ಎಸ್.ಡಿ, ರಾಮಣ್ಣ ಪೂಜಾರಿ ಭಕ್ತಕೋಡಿ, ಸದಸ್ಯರಾದ ವಸಂತ ಪೂಜಾರಿ ಕೈಪಂಗಲ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here