![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು: ತಂತಿ ಬದಲಾವಣೆ, ಲೈನ್ಗಳಿಗೆ ಮಧ್ಯಂತರ ಕಂಬಗಳ ಅಳವಡಿಕೆ ಕುರಿತು ಸಹಿತ ಒಟ್ಟು 26 ದೂರುಗಳು ಪುತ್ತೂರು ಮೆಸ್ಕಾಂ ಜನಸಂಪರ್ಕ ಸಭೆಯಲ್ಲಿ ಗ್ರಾಹಕರಿಂದ ಬಂದಿದೆ.
![](https://puttur.suddinews.com/wp-content/uploads/2023/08/IMG20230817113406_01.jpg)
ಮಂಗಳೂರು ವಿದ್ಯುತ್ ಸರಬರಾಜು ಕಂಪನಿ(ಮೆಸ್ಕಾಂ) ವತಿಯಂದ ಆ.17ರಂದು ಬನ್ನೂರು ಮೆಸ್ಕಾಂ ಕಚೇರಿಯಲ್ಲಿ ಸಾರ್ವಜನಿಕ ಜನಸಂಪರ್ಕ ಸಭೆಯು ಮೆಸ್ಕಾಂ ಅಧೀಕ್ಷಕ ಇಂಜಿನಿಯರ್ ಕೃಷ್ಣರಾಜ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಗ್ರಾಹಕರು ತಮ್ಮ ದೂರುಗಳನ್ನು ನೀಡಿದರು. ಇದೇ ಸಂದರ್ಭ ದೂರವಾಣಿಯ ಮೂಲಕವೂ ದೂರು ಸ್ವೀಕರಿಸಲಾಯಿತು. ಈ ಸಂದರ್ಭ ಮೆಸ್ಕಾಂ ಕಾರ್ಯಪಾಲಕ ಇಂಜಿನಿಯರ್ ರಾಮಚಂದ್ರ ಎಂ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರಾಮಚಂದ್ರ ಎ, ಲೆಕ್ಕಅಧೀಕ್ಷಕ ನಾರಾಯಣ ಶೆಟ್ಟಿ, ಸಹಾಯಕ ಇಂಜಿನಿಯರ್ ವಸಂತ ಮತ್ತು ಇತರ ಶಾಖಾ ಇಂಜಿನಿಯರ್ಗಳು ಸಭೆಯಲ್ಲಿ ದೂರುಗಳಿಗೆ ಸಂಬಂಧಿಸಿ ಮಾಹಿತಿ ಪಡೆದು ಕೊಂಡರು.