![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಕಾಣಿಯೂರು: ಪುಣ್ಚತ್ತಾರು ಶ್ರೀ ವಿಷ್ಣುಮೂರ್ತಿ ದೈವಸ್ಥಾನ ಮತ್ತು ಕಾಳಿಕಾಂಬಾ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ನೀಡಿರುವ ರೂ.2 ಲಕ್ಷ ಸಹಾಯಧನವನ್ನು ಕಡಬ ತಾಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಮೇದಪ್ಪ ನಾವೂರುರವರು ದೇವಸ್ಥಾನದ ಆಡಳಿತ ಸಮಿತಿಯವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಅಧ್ಯಕ್ಷ ಡಾ. ದೇವಿಪ್ರಸಾದ್ ಕಾನತ್ತೂರ್ , ಉಪಾಧ್ಯಕ್ಷರಾದ ವೆಂಕಟ್ರಮಣ ಆಚಾರ್ಯ , ಶೇಷಪ್ಪ ಗೌಡ ಬೆದ್ರಂಗಳ , ಕಾರ್ಯದರ್ಶಿ ಮೋನಪ್ಪ ಬಂಡಾಜೆ, ಸದಸ್ಯರಾದ ಸಂಜೀವ ರೈ ಪೈಕ, ಜನಾರ್ದನ ಆಚಾರ್ಯ, ಕೃಷ್ಣ ಆಚಾರ್ಯ, ಪುಣ್ಚತ್ತಾರು ಸೇವಾ ಪ್ರತಿನಿಧಿ ಮನೋರಮ, ಸವಣೂರು ವಲಯ ಜನಜಾಗೃತಿ ವೇದಿಕೆಯ ಪದಾಧಿಕಾರಿ ಅರವಿಂದ್ ಕೆ.ಎಸ್ ಪುಣ್ಚತ್ತಾರು, ರಾಜೇಶ್ ಕರಿಮಜಲು, ರಾಕೇಶ್ ಕರಿಮಜಲು, ಭವಿಷ್ ಕರಿಮಜಲು ಉಪಸ್ಥಿತರಿದ್ದರು.
![](https://puttur.suddinews.com/wp-content/uploads/2023/08/afe6bb22-de90-4443-be96-77eddc4d403b.jpg)