ಬಡಗನ್ನೂರು ಬಿಜೆಪಿ ಮುಖಂಡ ವಾಮನ ಮೂಲ್ಯ ಕಾಂಗ್ರೆಸ್ ಸೇರ್ಪಡೆ

0

ಪುತ್ತೂರು: ಬಡಗನ್ನೂರು ಗ್ರಾಮದ ಹಿರಿಯ ಬಿಜೆಪಿ ಮುಖಂಡ ವಾಮನ ಮೂಲ್ಯರವರು ತನ್ನ ಬೆಂಬಲಿಗರೊಂದಿಗೆ ಆ. 21 ರಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.


ಬಡಗನ್ನೂರು ಗ್ರಾಪಂ ಸಭಾಂಗಣದಲ್ಲಿ ನಡೆದ ಸಾರ್ವಜನಿಕರ ಅಹವಾಲು ಸ್ವೀಕಾರ ಸಮಾರಂಭದಲ್ಲಿ ಶಾಸಕರಾದ ಅಶೋಕ್ ರೈ ನೇತೃತ್ವದಲ್ಲಿ ಕಾಂಗ್ರೆಸ್ ಗೆ ಸೇರ್ಪಡೆಯಾದರು. ಶಾಸಕರು ಮತ್ತು ಜಿಲ್ಲಾ ಕಾಂಗ್ರೆಸ್ ವಕ್ತಾರ ಮಹಮ್ಮದ್ ಬಡಗನ್ನೂರುರವರು ಪಕ್ಷದ ದ್ವಜ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು. ಈ ವೇಳೆ ಕಾಂಗ್ರೆಸ್ ಮುಖಂಡರಾದ ರಾಕೇಶ್ ರೈ ಕುದ್ಕಾಡಿ, ಪುರಂದರ್ ರೈ ಕುದ್ಕಾಡಿ, ಬಡಗನ್ನೂರು ಗ್ರಾಪಂ ಮಾಜಿ ಅಧ್ಯಕ್ಷ ರವಿರಾಜ್ ರೈ ಸಜಂಕಾಡಿ, ಗ್ರಾಪಂ ಸದಸ್ಯರಾದ ಧರ್ಮೇಂದ್ರ ಕುಲಾಲ್, ಜ್ಯೋತಿ ಕಲಾವತಿ ಪಟ್ಲಡ್ಕ, ಗುರುಪ್ರಸಾದ್ ರೈ ಕುದ್ಕಾಡಿ, ಆಶಿಕ್ ಮೈಂದನಡ್ಕ, ಖಾದರ್ ಸುಳ್ಯಪದವು, ಕರೀಂ ಪಿಲಿಕ್ಕುಡೆ, ತ್ಯಾಗರಾಜ್, ಆಬಿದ್, ವಿಜಯ್, ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here