ಬಾಕಿ ತುಟ್ಟಿಭತ್ತೆ, ಕನಿಷ್ಟ ಕೂಲಿ ಜಾರಿ ಮಾಡಲಾಗ್ರಹಿಸಿ ಬೀಡಿ ಕಾರ್ಮಿಕರ ಹಕ್ಕೊತ್ತಾಯ ಚಳುವಳಿ

0

ಪುತ್ತೂರು:ಬೀಡಿ ಕಾರ್ಮಿಕರಿಗೆ 2015ರಿಂದ 2018ರವರೆಗೆ ಬಾಕಿ ಇರುವ ತುಟ್ಟಿಭತ್ತೆ ಹಾಗೂ ಕನಿಷ್ಠ ಕೂಲಿಯನ್ನು ನೀಡುವಂತೆ ಒತ್ತಾಯಿಸಿ ಪುತ್ತೂರಿನ ನಾಲ್ಕು ಬೀಡಿ ಸಂಸ್ಥೆಯ ಎದುರು ಬೀಡಿ ಕಾರ್ಮಿಕರು ಹಕ್ಕೊತ್ತಾಯ ಚಳವಳಿ ನಡೆಸಿದರು.
ಎಸ್.ಕೆ.ಬೀಡಿ ವರ್ಕರ್‍ಸ್ ಫೆಡರೇಶನ್ ಕರೆಯಂತೆ ಪುತ್ತೂರಿನ ಸಂಘಟನೆಯಿಂದ ಪುತ್ತೂರಿನ ಎಸ್.ಕೆ.ಹೆಚ್.ಐ, ಸದರ್ನ್ ಇಂಡಿಯಾ, ಭಾರತ್ ಬೀಡಿ, ಎಸ್.ಎಮ್.ಜೈನ್ ಸಂಸ್ಥೆಯ ಮುಂದೆ ಏಕಕಾಲದಲ್ಲಿ ಹಕ್ಕೊತ್ತಾಯ ಚಳವಳಿ ನಡೆಸಿದರು.

LEAVE A REPLY

Please enter your comment!
Please enter your name here