ಆ.27: ಆಲಂಕಾರು ವಲಯ ಬಂಟರ ಸಮಾವೇಶ,ವಿದ್ಯಾರ್ಥಿ ವೇತನ ವಿತರಣೆ,ಗೌರವರ್ಪಣೆ,ಕೃಷಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ

0

ಆಲಂಕಾರು: ಆಲಂಕಾರು ವಲಯ ಬಂಟರ ಸಂಘ (ರಿ) ಇದರ ಆಶ್ರಯದಲ್ಲಿ ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ಬಂಟರ ಸಮಾವೇಶ, ವಿದ್ಯಾರ್ಥಿ ವೇತನ ವಿತರಣೆ, ವಿವಾಹ ವಾರ್ಷಿಕೋತ್ಸವದ ಸುವರ್ಣ ಸಂಭ್ರಮವನ್ನಾಚರಿಸಿದ ದಂಪತಿಗಳಿಗೆ ಗೌರವರ್ಪಣೆ ಹಾಗೂ ಕಲ್ಲಂಗಳ ಗುತ್ತು ವಾಸಪ್ಪ ಪೆರ್ಗಡೆ ಕೃಷಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಆ.27 ರಂದು ಪೂರ್ವಾಹ್ನ 11:00 ಗಂಟೆಗೆ ನಡೆಯಲಿದೆ.

ಸಭಾಧ್ಯಕ್ಷತೆಯನ್ನು ಆಲಂಕಾರು ವಲಯ ಬಂಟರ ಸಂಘದ ಅಧ್ಯಕ್ಷರಾದ ಸೇಸಪ್ಪ ರೈ.ಕೆ ವಹಿಸಲಿದ್ದು.ಮುಖ್ಯ ಅತಿಥಿಗಳಾಗಿ ತಾ.ಪಂ ನಿವೃತ್ತ ವಿಸ್ತರಣಾಧಿಕಾರಿ ಜಗನ್ನಾಥ ರೈ ಅಂ ಬಾ,ಉಪ್ಪಿನಂಗಡಿ ಧನ್ವಂತರಿ ಕ್ಲಿನೀಕ್ ನ ವೈದ್ಯರಾದ ನಿರಂಜನ ರೈ, ಗುಪ್ರಚರ ಅಧಿಕಾರಿ,ಬೆಂಗಳೂರಿನ ಗಣೇಶ್ ರೈ ಕುಂತೂರು,ಕೃಷಿ ಪ್ರಶಸ್ತಿ ಪುರಸ್ಕೃತರಾದ ರಘನಾಥ ಚೌಟ,ಕಾಫಿಕಾಡು ಹಳೇನೆರೆಂಕಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರದಲ್ಲಿ ವಲಯದ ಎಲ್ಲಾ ಬಂಟ ಬಾಂಧವರು ಭಾಗವಹಿಸುವಂತೆ ಎಂದು ಸಂಘದ ಪ್ರದಾನ ಕಾರ್ಯದರ್ಶಿ ಪ್ರಶಾಂತ ರೈ ಮನವಳಿಕೆ, ಉಪಾಧ್ಯಕ್ಷರಾದ ರಾಮಮೋಹನ ರೈ ಸುರುಳಿ, ಪ್ರಭಾರಘನಾಥ ಚೌಟ,ಜೊತೆ ಕಾರ್ಯದರ್ಶಿ ಲೋಕನಾಥ ರೈ ರಾಮಕುಂಜ, ಸಂಘಟನಾ ಕಾರ್ಯದರ್ಶಿ ಚೆನ್ನಕೇಶವ ರೈ ಗುತ್ತುಪಾಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here