ಪಡುಮಲೆ ಶ್ರೀ  ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನ ಪರಿಸರದಲ್ಲಿ ವನಮಹೋತ್ಸವ

0

ಬಡಗನ್ನೂರುಃ  ವಿಜಯ ಗ್ರಾಮೀಣ ಪ್ರತಿಷ್ಠಾನ ಮಂಗಳೂರು ಹಾಗೂ, ಬಡಗನ್ನೂರು ಗ್ರಾಮಾರಾಣ್ಯ  ಘಟಕದ ವತಿಯಿಂದ  ಪಡುಮಲೆ ಶ್ರೀ  ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನ ಪರಿಸರದಲ್ಲಿ ಸಸಿ ನೆಟ್ಟು ವನಮಹೋತ್ಸವ ಆಚರಣೆ ಮಾಡಲಾಯಿತು.ಪಾಣಾಜೆ ವಲಯಾರಣ್ಯಾಧಿಕಾರಿ ಪ್ರಕಾಶ್ ರೈ ಸಸಿ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಕುಂಬ್ರ ಬರೋಡಾ ಬ್ಯಾಂಕ್ ಈ ಸೀನಿಯರ್ ಮ್ಯಾನೇಜರ್ ರಾಜ, ಅರಣ್ಯ ರಕ್ಷಕ ಲಿಂಗರಾಜು, ಗ್ರಾಮಾರಣ್ಯ ಸಮಿತಿ ಅಧ್ಯಕ್ಷೆ ರೇಖಾ ನಾಗರಾಜ್, ವಿಜಯ ಗ್ರಾಮೀಣ ಪ್ರತಿಷ್ಠಾನ  ಬಡಗನ್ನೂರು ಘಟಕ ಇದರ ಅಧ್ಯಕ್ಷ ರಾಮಕೃಷ್ಣ ಭಟ್ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಉತ್ಸವ ಸಮಿತಿ ಅದ್ಯಕ್ಷ ರಾಮಣ್ಣ ಗೌಡ ಬಸವ ಹಿತ್ಲು ,ಹಾಗೂ ಗ್ರಾಮಾರಣ್ಯ  ಸಮಿತಿ ಸದಸ್ಯರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here