ಉಪ್ಪಿನಂಗಡಿ: ಮನೆಗೆ ನುಗ್ಗಿ ಹಲ್ಲೆ: ದೂರು

0

ಉಪ್ಪಿನಂಗಡಿ: ಬೆಳ್ತಂಗಡಿ ತಾಲೂಕು ತೆಕ್ಕಾರು ಗ್ರಾಮದ ಮೈಮುನಾ ಎಂಬವರ ಮನೆಗೆ ಐದಾರು ಮಂದಿಯ ತಂಡವೊಂದು ನುಗ್ಗಿ ಅನುಚಿತವಾಗಿ ವರ್ತಿಸಿದ್ದಲ್ಲದೆ, ತಡೆಯಲು ಬಂದ ಆಕೆಯ ಅಸ್ವಸ್ಥ ಮಗನ ಮೇಲೂ ಹಲ್ಲೆ ನಡೆಸಿದ ಘಟನೆಯ ಬಗ್ಗೆ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಲಾಗಿದೆ.


ಪ್ರಧಾನ ಆರೋಪಿ ಮಹಮ್ಮದ್ ಕುಟೇಲು ಎಂಬಾತ ತನ್ನ ಐದಾರು ಮಂದಿ ಸಂಗಡಿಗರೊಡಗೂಡಿ, ಮಾರಕಾಯುಧಗಳೊಂದಿಗೆ ಗುರುವಾರ ಸಂಜೆ ಮನೆಗೆ ಅಕ್ರಮ ಪ್ರವೇಶ ಮಾಡಿ ಮೈಮುನಾ ರವರೊಂದಿಗೆ ಅನುಚಿತವಾಗಿ ವರ್ತಿಸಿದ್ದಲ್ಲದೆ, ತಡೆಯಲು ಬಂದ ಆಕೆಯ ಅಸ್ವಸ್ಥ ಮಗನ ಮೇಲೂ ಹಲ್ಲೆ ನಡೆಸಿ ಜೀವಬೆದರಿಕೆಯೊಡ್ಡಿದ್ದು, ಹಲ್ಲೆಯಿಂದ ಅಸ್ವಸ್ಥಗೊಂಡ ಆಕೆಯ ಮಗನನ್ನು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here