ಆಲಂಕಾರು: ಗಾಂಜಾ ಸೇವನೆ-ಬಂಧನ,ಬಿಡುಗಡೆ

0

ಆಲಂಕಾರು: ಆಲಂಕಾರು ಪೇಟೆಯಲ್ಲಿ ಯುವಕನೋರ್ವ ಶ್ರೀ ಮೆಡಿಕಲ್ ಮುಂಭಾಗದಲ್ಲಿ ಅಮಲು ಪದಾರ್ಥ ಸೇವಿಸಿ, ಗಲಾಟೆ ಮಾಡಿ ನಂತರ ಸಾರ್ವಜನಿಕರಿಗೆ ತೊಂದರೆ ಮಾಡುತ್ತಿರುವ ಬಗ್ಗೆ ಕಡಬ ಪೊಲೀಸರಿಗೆ ಕರೆ ಬಂದ ಹಿನ್ನೆಲೆಯಲ್ಲಿ ಕಡಬ ಪೊಲೀಸರು ಆರೋಪಿಯನ್ನು ಬಂಧಿಸಿ, ವಿಚಾರಿಸಿ ಬಿಡುಗಡೆಗೊಳಿಸಿದ್ದಾರೆ.

ಸಾರ್ವಜನಿಕರ ದೂರಿನ ಮೇರೆಗೆ ಪೊಲೀಸರು ಶ್ರೀ ಮೆಡಿಕಲ್ ಬಳಿ ಬಂದಾಗ ತೂರಾಡಿಕೊಂಡು ಸಾರ್ವಜನಿಕರಲ್ಲಿ ಗಲಾಟೆ ಮಾಡುತ್ತಿದ್ದ ಕುಂತೂರು ಗ್ರಾಮದ ಬೀರಂತಡ್ಕದ ಸಂದೇಶ್ ಮೇಲೆ ಗಾಂಜಾ ಸೇವನೆಯ ಬಗ್ಗೆ ಸಂಶಯಗೊಂಡ ಆತನನ್ನು ವೈದ್ಯಕೀಯ ಪರೀಕ್ಷೆಗಾಗಿ ಪುತ್ತೂರು ಸಾರ್ವಜನಿಕ ಆಸ್ಪತ್ರೆಗೆ ಕಳುಹಿಸಿಕೊಟ್ಟ ನಂತರ ವೈದ್ಯಕೀಯ ಪರೀಕ್ಷೆಯಲ್ಲಿ ಆತ ಗಾಂಜಾ ಸೇವನೆ ಮಾಡಿರುವುದು ಧೃಢಪಟ್ಟಿದೆ.ಆ ಬಳಿಕ ಆತನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡು ಬಿಡುಗಡೆಗೊಳಿಸಿದ್ದಾರೆ. ಕಡಬ ಠಾಣೆಯಲ್ಲಿ ಪ್ರಕರಣ ದಾಖಲೆಯಾಗಿದೆ.

LEAVE A REPLY

Please enter your comment!
Please enter your name here