ಉಪ್ಪಿನಂಗಡಿ:ಪ್ರೀತಿಯ ವಿಚಾರದಲ್ಲಿ ಯುವಕನಿಗೆ ಹಲ್ಲೆ

0

ಉಪ್ಪಿನಂಗಡಿ: ಯುವತಿಯೋರ್ವಳ ವಿಚಾರಕ್ಕೆ ಸಂಬಂಧಿಸಿ ಆಕೆಯ ಸಂಬಂಧಿಕರಿಬ್ಬರು ಯುವಕನೋರ್ವನಿಗೆ ಹಲ್ಲೆ ನಡೆಸಿದ ಘಟನೆ ಆ.29ರಂದು ಉಪ್ಪಿನಂಗಡಿಯಲ್ಲಿ ನಡೆದಿದ್ದು, ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಡ್ಪಳ್ಳಿ ಗ್ರಾಮದ ಪುತ್ತೂರು ನಿವಾಸಿ ಸುನೀಲ್ ಕುಮಾರ್ (32) ಹಲ್ಲೆಗೊಳಗಾಗಿದ್ದು, ಪ್ರವೀಣ್ ಹಾಗೂ ಶೇಖರ ಹಲ್ಲೆ ನಡೆಸಿದ ಆರೋಪಿಗಳು. ಸುನೀಲ್ ಅವರು ಉಪ್ಪಿನಂಗಡಿಯ ಪೃಥ್ವಿ ಕಾಂಪ್ಲೆಕ್ಸ್‌ನ ಅಂಗಡಿಯಲ್ಲಿ ಕೆಲಸದಲ್ಲಿರುವ ಸಂದರ್ಭ ಅಲ್ಲಿಗೆ ಬಂದ ಆರೋಪಿಗಳು ಇವರ ಸಂಬಂಧಿಯಾಗಿರುವ ಯುವತಿಯನ್ನು ಸುನೀಲ್ ಕುಮಾರ್ ಪ್ರೀತಿಸುವ ವಿಚಾರದಲ್ಲಿ ತಗಾದೆ ತೆಗೆದು, ಅವ್ಯಾಚ್ಯ ಶಬ್ದಗಳಿಂದ ಬೈದು, ಅಂಗಡಿಯಲ್ಲಿದ್ದ ಸ್ಕ್ರೂ ಡ್ರೈವರ್‌ನಿಂದ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸುನೀಲ್ ಕುಮಾರ್ ಉಪ್ಪಿನಂಗಡಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here