ಎಲೆಕ್ಟ್ರಾನಿಕ್ ಚಿನ್ನ ತೂಕದ ಯಂತ್ರಗಳಿಗೆ ಸೀಲ್ ಕಾರ್ಯಗಾರ

0

ಪುತ್ತೂರು: ದ.ಕ ಜಿಲ್ಲಾ ಚಿನ್ನದ ಕೆಲಸಗಾರರ ಸಂಘ ಮಂಗಳೂರು, ವಿಶ್ವಬ್ರಾಹ್ಮಣ ಸೇವಾ ಸಂಘ ಮತ್ತು ವಿಶ್ವಕರ್ಮ ಯುವ ಸಮಾಜದ ವತಿಯಿಂದ ಕಾನೂನು ಮಾಪನಾಶಾಸ್ತ್ರ ಇಲಾಖೆಯ ಸಹಯೋಗದೊಂದಿಗೆ ಚಿನ್ನದ ತೂಕ ಮಾಡುವ ಇಲೆಕ್ಟ್ರಾನಿಕ್ ಯಂತ್ರಗಳಿಗೆ ಸೀಲ್(ಸತ್ಯಾಪನಾ ಮುದ್ರೆ) ಕಾರ್ಯಗಾರವು ಆ.30 ರಂದು ಬೊಳುವಾರು ವಿಶ್ವಕರ್ಮ ಸಭಾಭವನದಲ್ಲಿ ನಡೆಯಿತು.


ಕಾನೂನು ಮಾಪನಾ ಶಾಸ್ತ್ರ ಇಲಾಖೆಯ ನಿರೀಕ್ಷಕ ನರೇಂದ್ರ ಸಿಯವರ ನೇತೃತ್ವದಲ್ಲಿ ಕಾರ್ಯಗಾರವು ನೆರವೇರಿತು. ದ.ಕ ಜಿಲ್ಲಾ ಚಿನ್ನದ ಕೆಲಸಗಾರರ ಸಂಘದ ಕಾರ್ಯದರ್ಶಿ ಶಶಿಕಾಂತ ಆಚಾರ್ಯ ಕೆ., ವಿಶ್ವಬ್ರಾಹ್ಮನ ಸೇವಾ ಸಂಘದ ಅಧ್ಯಕ್ಷ ಶ್ರೀಧರ ಆಚಾರ್ಯ ಕೊಕ್ಕಡ, ಕಾರ್ಯದರ್ಶಿ ಆನಂದ ಆಚಾರ್ಯ, ವಿಶ್ವಕಮ್ ಯುವ ಸಮಾಜದ ಅಧ್ಯಕ್ಷ ಪ್ರಕಾಶ್ ಆಚಾರ್ಯ, ಸದಸ್ಯ ವಸಂತ ಆಚಾರ್ಯ ಮೊದಲಾದವು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here