ಮುಕ್ರಂಪಾಡಿ: ಸರಣಿ ಅಪಘಾತ, ಈರ್ವರಿಗೆ ಗಾಯ

0

ಪುತ್ತೂರು: ಮಾಣಿ-ಮೈಸೂರು ರಾಜ್ಯ ಹೆದ್ದಾರಿಯ ಮುಕ್ರಂಪಾಡಿ ಭಗವತಿ ಗ್ಯಾರೇಜ್ ಬಳಿಯ ಅಪಾಯಕಾರಿ ತಿರುವಿನಲ್ಲಿ ಎರಡು ಬೈಕ್ ಹಾಗೂ ಕಾರಿನ ನಡುವೆ ಢಿಕ್ಕಿ ಸಂಭವಿಸಿದ ಘಟನೆ ಸೆ.1ರಂದು ಸಂಜೆ ನಡೆದಿದೆ.
ಸಂಪ್ಯ ಅಕ್ಷಯ ಕಾಲೇಜಿನ ವಿದ್ಯಾರ್ಥಿ ಎನ್ನಲಾದ ಮೆಲ್ವಿನ್ ಪುರುಷರಕಟ್ಟೆ ಎಂಬವರು ಪಲ್ಸರ್(ಕೆಎ21ವೈ6844) ಬೈಕ್ ಚಲಾಯಿಸಿಕೊಂಡು ಪುತ್ತೂರು ಕಡೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಮುಕ್ರಂಪಾಡಿ ತಿರುವಿನಲ್ಲಿ ಓವರ್ ಟೇಕ್ ಮಾಡುವ ಭರದಲ್ಲಿ ಸಂಪ್ಯ ಕಡೆಗೆ ಸಾಗುತ್ತಿದ್ದ ಟೊಯೋಟಾ ಇನ್ನೋವಾ(ಕೆಎ22ಎನ್5093) ಕಾರಿನ ಹಿಂಬದಿ ಟಯರ್ ಗೆ ಢಿಕ್ಕಿ ಹೊಡೆದ ರಭಸಕ್ಕೆ ಪಲ್ಸರ್ ಬೈಕ್ ಹಾಗೂ ಇನ್ನೋವಾ ಕಾರಿನ ಟೈರ್ ಗಳೆರಡು ಒಡೆದು ಹೋಗಿವೆ. ಮಾತ್ರವಲ್ಲ ಪಲ್ಸರ್ ಬೈಕ್ ಇನ್ನೋವಾ ಕಾರಿನ ಹಿಂಬದಿಯಿಂದ ಬರುತ್ತಿದ್ದ ಸ್ಪ್ಲೆಂಡರ್ ಬೈಕ್(ಕೆಎ21ಇಸಿ0770)ಗೂ ಢಿಕ್ಕಿ ಹೊಡೆದಿದೆ. ಗಾಯಾಳು ಮೆಲ್ವಿನ್ ರವರನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಪುತ್ತೂರು ಸಂಚಾರಿ ಪೊಲೀಸರು ಆಗಮಿಸಿರುತ್ತಾರೆ.

LEAVE A REPLY

Please enter your comment!
Please enter your name here