![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು: ವಿದ್ಯಾಭಾರತಿ ಮತ್ತು ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾದ ಸದಸ್ಯ ಸಂಸ್ಥೆಯ ವತಿಯಿಂದ ತೆಂಕಿಲದ ವಿವೇಕಾನಂದ ಕ್ರೀಡಾಂಗಣದಲ್ಲಿ ನಡೆದ ಶಿಶುವರ್ಗ ವಿಭಾಗದ 100 ಮೀಟರ್ ಓಟದ ಸ್ಪರ್ಧೆಯಲ್ಲಿ ಉಪ್ಪಿನಂಗಡಿ ವೇದಶಂಕರನಗರದ ಶ್ರೀರಾಮ ಶಾಲೆಯ 5ನೇ ತರಗತಿ ವಿದ್ಯಾರ್ಥಿನಿ ವಂಶಿತ ಜಿ. ಇವರು ದ್ವಿತೀಯ ಸ್ಥಾನ ಗಳಿಸಿದ್ದಾರೆ. ಇವರಿಗೆ ದೈಹಿಕ ಶಿಕ್ಷಣ ಮಾತಾಜಿ ಕು.ಶ್ರೀ ರಂಜಿನಿ ತರಬೇತಿ ನೀಡಿದ್ದರು. ವಂಶಿತರವರು ಬಜತ್ತೂರು ನಿವಾಸಿ ಕೃಷ್ಣಪ್ಪ.ಜಿ ಮತ್ತು ರವಿಕಲಾರವರ ಪುತ್ರಿ.