ಬೆಂಗಳೂರು ತುಳುಕೂಟದ ಗೌರವ ನಿರ್ದೇಶಕರಾಗಿ ಅಕ್ಷಯ್ ರೈ ದಂಬೆಕ್ಕಾನ ಆಯ್ಕೆ

0

ಪುತ್ತೂರು: ಬೆಂಗಳೂರಿನಲ್ಲಿ 1973 ರಲ್ಲಿ ಆರಂಭವಾದ ಬೆಂಗಳೂರು ತುಳು ಕೂಟಕ್ಕೆ 50 ವರ್ಷಗಳ ಸಂಭ್ರಮ. 2023ರಲ್ಲಿ 50 ನೇ ವರ್ಷಾಚರಣೆ ಇರುವುದರಿಂದ ಬೆಂಗಳೂರಿನಲ್ಲಿ 3 ದಿನಗಳ ಅದ್ಧೂರಿ ಕಾರ್ಯಕ್ರಮ ನಡೆಯಲಿದೆ. ಇದರ ಸಲುವಾಗಿ ತುಳುನಾಡಿನ ಜಾನಪದ ಕ್ರೀಡೆಯಾಗಿರುವ ಕಂಬಳ ಕೂಟವು ನಡೆಯಲಿದೆ. 50 ನೇ ವರ್ಷಾಚರಣೆಯ ಗೌರವ ಅಧ್ಯಕ್ಷರಾಗಿ ರವಿ ಶೆಟ್ಟಿ ಕತ್ತಾರು ಆಗಿದ್ದಾರೆ. ಗೌರವ ನಿರ್ದೇಶಕರಾಗಿ ಬೆಂಗಳೂರು ರಾಜಕೀಯ ವಲಯದಲ್ಲಿ ಸಕ್ರೀಯರಾಗಿರುವ ಅಕ್ಷಯ್ ರೈ ದಂಬೆಕ್ಕಾನರವರನ್ನು ಆಯ್ಕೆ ಮಾಡಲಾಗಿದೆ.


ಅಕ್ಷಯ್ ರೈಯವರು ಕಳೆದ ಹಲವು ವರ್ಷಗಳಿಂದ ಬೆಂಗಳೂರು ರಾಜಕೀಯ ವಲಯದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದು ತುಳುವರ ಪರವಾಗಿ ಯಾವುದೇ ಸಮಸ್ಯೆ ಇದ್ದರೂ ಅವುಗಳನ್ನು ತಿಳಿದುಕೊಂಡು ತುಳುವರ ಅವಶ್ಯಕತೆಗಳನ್ನು ಪೂರೈಸುತ್ತಾ ಬಂದಿದ್ದಾರೆ. ಆದ್ದರಿಂದ ತುಳುಕೂಟದ ಗೌರವ ನಿರ್ದೇಶಕರಾಗಿ ಅಕ್ಷಯ್ ರೈಯವರನ್ನು ಆಯ್ಕೆ ಮಾಡಲಾಗಿದೆ ಎಂದು ತುಳು ಕೂಟದ ಅಧ್ಯಕ್ಷ ಸುಂದರ್ ರೈ ತಿಳಿಸಿದ್ದಾರೆ. ಅಕ್ಷಯ್ ರೈ ದಂಬೆಕ್ಕಾನರವರು ಕೆಯ್ಯೂರು ಗ್ರಾಮದ ನೂಜಿ ತರವಾಡು ಮನೆಯ ಸದಾಶಿವ ರೈ ದಂಬೆಕ್ಕಾನ ಮತ್ತು ಪ್ರಭಾ ಎಸ್ ರೈಯವರ ಪುತ್ರರಾಗಿದ್ದಾರೆ.

LEAVE A REPLY

Please enter your comment!
Please enter your name here