ನಿಡ್ಪಳ್ಳಿ:ಶ್ರೀ ಕ್ಷೆ.ಧ.ಗ್ರಾ.ಯೋಜನೆಯ ಒಕ್ಕೂಟದ ತ್ರೈಮಾಸಿಕ ಸಭೆ

0

ನಿಡ್ಪಳ್ಳಿ; ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್ ಪುತ್ತೂರು ಬೆಟ್ಟಂಪಾಡಿ ವಲಯದ ನಿಡ್ಪಳ್ಳಿ ಒಕ್ಕೂಟದ ತ್ರೈಮಾಸಿಕ ಸಭೆ ಸೆ.17 ರಂದು ಒಕ್ಕೂಟದ ಅಧ್ಯಕ್ಷ ರಾಧಾಕೃಷ್ಣ ಪಾಟಾಳಿ ಬಡಕಾಯೂರು ಇವರ ಅಧ್ಯಕ್ಷತೆಯಲ್ಲಿ ನಿಡ್ಪಳ್ಳಿ ಶಾಲೆಯಲ್ಲಿ ನಡೆಯಿತು.

ವಲಯ ಮೆಲ್ವೀಚಾರಕ ಚಂದ್ರಶೇಖರ ಯೋಜನೆಯ ವಿವಿಧ ಅಭಿವೃದ್ಧಿ ಕಾರ್ಯಕ್ರಮ ಮತ್ತು ಸಂಘದ ಸದಸ್ಯರು ನಿರ್ವಹಿಸ ಬೇಕಾದ ನಿಯಮಗಳ ಬಗ್ಗೆ ಮಾಹಿತಿ ನೀಡಿದರು.ಸೇವಾ ಪ್ರತಿನಿಧಿ ಶಾಲಿನಿ ಮಾಹಿತಿ ನೀಡಿದರು.ತಂಡದ ಹಾಜರಾತಿ, ಗ್ರೇಡಿಂಗ್ ಹಾಕಲಾಯಿತು.

ಜವಾಬ್ದಾರಿ ತಂಡಗಳಾದ ಸಿದ್ದಿವಿನಾಯಕ, ಶ್ರೀಶಾಂತಿ, ಭುವನೇಶ್ವರಿ ತಂಡಗಳ ವರದಿ ವಾಚಿಸಿದರು. ಒಕ್ಕೂಟದ ಕಾರ್ಯದರ್ಶಿ ಶ್ರೀಮತಿ ಒಕ್ಕೂಟದ ವರದಿ ವಾಚಿಸಿದರು.ಒಕ್ಕೂಟದ ಉಪಾಧ್ಯಕ್ಷ ಸತೀಶ್ ನಾಯ್ಕ.ಎಂ, ಜತೆ ಕಾರ್ಯದರ್ಶಿ ಹೇಮಾವತಿ ಸಿ.ಎಚ್, ಕೋಶಾಧಿಕಾರಿ ತಿಮ್ಮಪ್ಪ.ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಐತ್ತಪ್ಪ ನಾಯ್ಕ ಕೋಡಿ ಸ್ವಾಗತಿಸಿದರು. ಲತಾ ಪಟ್ಟೆ ವಂದಿಸಿದರು.

LEAVE A REPLY

Please enter your comment!
Please enter your name here