ಬಿ.ಕೆ.ಬಿಲ್ಡ್ ಮಾರ್ಟ್ ವತಿಯಿಂದ ವಿಜೇತ ಗ್ರಾಹಕರಿಗೆ ಬಹುಮಾನ ಕೊಡುಗೆ

0

ಪುತ್ತೂರು : ಮನೆ ,ಕಟ್ಟಡ ಸಾಮಾಗ್ರಿಗಳ ಮಾರಾಟ ಮಳಿಗೆ ಸೆ.18 ರಂದು ಇಲ್ಲಿನ ಮುರ ಎಂ.ಪಿ.ಎಂ.ಶಾಲಾ ಬಳಿ ಶುಭಾರಂಭಗೊಂಡಿರುವ ಬಿ.ಕೆ.ಬಿಲ್ಡ್ ಮಾರ್ಟ್ ಶುಭಾರಂಭದ ಸಲುವಾಗಿ ಪ್ರಿಯ ಗ್ರಾಹಕ ವರ್ಗಕ್ಕೆ ಅನೇಕ ರೀತಿಯ ಕೊಡುಗೆಗಳನ್ನೂ ಘೋಷಣೆ ಮಾಡಿತ್ತು.ಅವುಗಳಲ್ಲಿ ಮುಖ್ಯವಾಗಿ ಶುಭಾರಂಭ ದಿನವೇ ಪ್ರತಿ ಗಂಟೆಗೊಂದು ಗ್ರಾಹಕರನ್ನು ಆಯ್ಕೆ ಮಾಡಿ , ಬಹುಮಾನ ನೀಡುವ ಕಾರ್ಯಕ್ರಮ ನೆರವೇರಿತು.


ಮಾಜಿ ಸಚಿವ ಬಿ‌.ರಮಾನಾಥ ರೈ ಇವರು ಚೀಟಿ ತೆಗೆಯೋ ಮೂಲಕ ವಿಜೇತರ ಹೆಸರು ಘೋಷಣೆ ಮಾಡಿದರು.ಮೊದಲ ವಿಜೇತ ಗ್ರಾಹಕ ಇಸ್ಮಾಯಿಲ್ ಬ್ರೈಟ್ ಪೋಳ್ಯ ಇವರಿಗೆ ಮಾಜಿ ಸಚಿವರು ಬಹುಮಾನ ವಿತರಣೆ ಮಾಡಿ , ಹಾರೈಸಿದರು.ಈ ವೇಳೆ ಜೆಡಿಎಸ್ ರಾಜ್ಯ ಕಾರ್ಯದರ್ಶಿ ಇಬ್ರಾಹಿಂ ಗೋಳಿಕಟ್ಟೆ , ಆಶ್ರಫ್ ಕಲ್ಲೇಗ , ಜಿ.ಪಂ.ಮಾಜಿ ಉಪಾಧ್ಯಕ್ಷ ಎಂ.ಎಸ್.ಮಹಮ್ಮದ್ , ಶರೀಫ್ ಸಾಲ್ಮರ ,ಸಂಸ್ಥೆ ಮಾಲೀಕ ಬಿ.ಕೆ.ಮೊಯಿನುದ್ದೀನ್ ಹಾಗೂ ಅವರ ತಂದೆ ಪುತ್ತು ಹಾಜಿ ಬಾಯರ್(ಅಬ್ದುಲ್‌ ರಶೀದ್) ಹಾಜರಿದ್ದರು.

LEAVE A REPLY

Please enter your comment!
Please enter your name here