![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
![](https://puttur.suddinews.com/wp-content/uploads/2023/09/accident-620x334-1.jpg)
ಪುತ್ತೂರು:ಕೌಡಿಚ್ಚಾರ್ ಪಲ್ಲದಕೆರೆ ಸಮೀಪ ಸ್ಕೂಟರೊಂದು ಪಲ್ಟಿಯಾಗಿ ಸವಾರ ಪ್ರವೀಣ ರೈ ಎಂಬವರು ಗಾಯಗೊಂಡ ಘಟನೆ ವರದಿಯಾಗಿದೆ. ಗಂಭೀರ ಗಾಯಗೊಂಡಿರುವ ಸವಾರನನ್ನು ಮಂಗಳೂರು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಘಟನೆ ಕುರಿತು ಸವಾರನ ಸಂಬಂಧಿಯಾಗಿರುವ ನೆಟ್ಟಣಿಗೆ ಮುಡ್ನೂರು ಮಧುಕರ್ ರೈ ಎಂಬವರು ನೀಡಿದ ದೂರಿನ ಮೇರೆಗೆ ಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.