ಪುತ್ತೂರು: ಧೀಶಕ್ತಿ ಮಹಿಳಾ ಯಕ್ಷಬಳಗದಿಂದ ತಾಳಮದ್ದಳೆ

0

ಪುತ್ತೂರು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಶ್ರೀ ಮಹಾಲಿಂಗೇಶ್ವರ ದೇವಳದ ವಠಾರ,ಪುತ್ತೂರು ಇಲ್ಲಿ ನಡೆದ 57ನೇ ವರ್ಷದ ಗಣೇಶೋತ್ಸವದ ಸಂಭ್ರಮದ ಅಂಗವಾಗಿ ಪುತ್ತೂರು ತೆಂಕಿಲ ಧೀಶಕ್ತಿ ಮಹಿಳಾ ಯಕ್ಷಬಳಗದಿಂದ ಹಲಸಿನಹಳ್ಳಿ ನರಸಿಂಹ ಶಾಸ್ತ್ರೀ ವಿರಚಿತ, “ವರ ಸ್ಯಮಂತಕ” ಎನ್ನವ ಆಖ್ಯಾನದ ತಾಳಮದ್ದಳೆಯು ಪದ್ಮಾ ಕೆ ಆರ್ ಆಚಾರ್ಯರವರ ಸಾರಥ್ಯದಲ್ಲಿ ನಡೆಯಿತು.

ಹಿಮ್ಮೇಳದಲ್ಲಿ,ಭಾಗವತರಾಗಿ,ಕು| ಸಿಂಚನಾ ಮೂಡುಕೋಡಿ,ಚೆಂಡೆ ಮದ್ದಲೆಗಳಲ್ಲಿ ರಾಮದಾಸ್ ಶೆಟ್ಟಿ,ವಗೆನಾಡು,ಮಾ| ಅದ್ವೈತ್ ಕನ್ಯಾನ ಸಹಕರಿಸಿದರು.ಮುಮ್ಮೇಳದಲ್ಲಿ ಪದ್ಮಾ ಕೆ ಆರ್ ಆಚಾರ್ಯ ಶ್ರೀಕೃಷ್ಣನಾಗಿ, ಜಾಂಬವನಾಗಿ ಜಯಲಕ್ಷ್ಮಿ ವಿ ಭಟ್, ಬಲರಾಮನಾಗಿ ಶ್ರೀವಿದ್ಯಾ ಜೆ ರಾವ್, ಮೊದಲನೇ ಭಾಗದ ಕೃಷ್ಣನಾಗಿ ಶುಭಾ ಪಿ ಆಚಾರ್ಯ, ನಾರದನಾಗಿ ಪ್ರೇಮಾ ನೂರಿತ್ತಾಯ, ಶ್ರೀರಾಮನಾಗಿ ಹೀರಾ ಉದಯ್ ಪಾತ್ರ ನಿರ್ವಹಣೆ ಮಾಡಿದರು.

LEAVE A REPLY

Please enter your comment!
Please enter your name here