ಬೊಳುವಾರು ಅಟೋಮ್ಯಾಟ್ರಿಕ್ಸ್‌ನಲ್ಲಿ ನ್ಯೂ ನೆಕ್ಸಾನ್ ಕಾರುಗಳ ಬಿಡುಗಡೆ

0

ಪುತ್ತೂರು: ಟಾಟಾ ಮೋಟಾರ‍್ಸ್‌ನ ಅಧಿಕೃತ ವಿತರಕರಾದ ಮಂಗಳೂರಿನ ಬಿಜೈಯಲ್ಲಿ ಪ್ರಧಾನ ಕಚೇರಿ ಹೊಂದಿರುವ ಅಟೋಮ್ಯಾಟ್ರಿಕ್ಸ್‌ನ ಬೊಳುವಾರು ಶೋರೂಮ್‌ನಲ್ಲಿ ನ್ಯೂ ನೆಕ್ಸಾನ್ ಪೆಟ್ರೋಲ್ ಮತ್ತು ನ್ಯೂ ನೆಕ್ಸಾನ್ ಇವಿ ಕಾರುಗಳ ಬಿಡುಗಡೆ ಕಾರ್ಯಕ್ರಮ ನಡೆಯಿತು.

ನೆಕ್ಸಾನ್ ಗ್ರಾಹಕರಾದ ಪ್ರಗತಿಪರ ಕೃಷಿಕ ರಾಮ್‌ಪ್ರಸಾದ್ ಕರಿಯಾಲ ಮತ್ತು ಪುತ್ತೂರು ಕೆನರಾ ಬ್ಯಾಂಕ್ ರಿಟೈಲ್ ಹಬ್ ಮ್ಯಾನೇಜರ್ ನೀಲಾಧರ್ ಭಂಡಾರ್‌ಕಾರ್‌ರವರು ನೂತನ ನೆಕ್ಸಾನ್ ಕಾರುಗಳನ್ನು ಬಿಡುಗಡೆ ಮಾಡಿದರು. ಬಳಿಕ ರಾಮಪ್ರಸಾದ್ ಕರಿಯಾಲ ಮಾತನಾಡಿ ಸ್ವದೇಶಿ ಕಂಪೆನಿಯಾದ ಟಾಟಾ ಮೋಟಾರ‍್ಸ್ ನಂಬಿಕೆಗೆ ಪಾತ್ರವಾಗಿದೆ. 2017ರಲ್ಲಿ ನಾನು ನೆಕ್ಸಾನ್ ಕಾರು ಖರೀದಿಸಿದ್ದೇನೆ. ಬಹಳ ಉತ್ತುಮವಾದ ಕಾರು ಇದಾಗಿದೆ. ಗ್ರೌಂಡ್ ಕೀಯರೆನ್ಸ್, ಸೀಟಿಂಗ್ ಕಂಪರ್ಟ್, ರೋಡ್ ಗ್ರಿಪ್ ಮುಂತಾದ ವೈಶಿಷ್ಟ್ಯತೆಯನ್ನು ನೆಕ್ಸಾನ್ ಹೊಂದಿದೆ. ಟಾಟಾದ ಸಂತೃಪ್ತ ಗ್ರಾಹಕನಾಗಿದ್ದೇನೆ ಎಂದು ಹೇಳಿ ಟಾಟಾ ಕಂಪೆನಿಗೆ ಕೃತಜ್ಞತೆ ಸಲ್ಲಿಸಿದರು. ನೀಲಾಧರ್ ಭಂಡಾರ್‌ಕಾರ್ ಮಾತನಾಡಿ ನೆಕ್ಸಾನ್‌ನ ಎರಡು ವಿಧದ ಕಾರುಗಳು ತುಂಬಾ ಫೀಚರ‍್ಸ್ ಹೊಂದಿದೆ. ಕಾರು ಹಲವು ವಿಶೇಷತೆಯನ್ನು ಹೊಂದಿದೆ. ಟಾಟಾ ಗ್ರಾಹಕರು ತನ್ನ ಇತರ ಸ್ನೇಹಿತರಿಗೆ ರೆಫರ್ ಮಾಡಿ ಎಂದು ಹೇಳಿ ಕೆನರಾ ಬ್ಯಾಂಕ್‌ನಿಂದ ಸಾಲ ಸೌಲಭ್ಯಗಳ ಮಾಹಿತಿ ತಿಳಿಸಿದರು. ಅಟೋಮ್ಯಾಟ್ರಿಕ್ಸ್‌ನ ಕಸ್ಟಮರ್ ರಿಲೇಶನ್‌ಶಿಪ್ ಮ್ಯಾನೇಜರ್ ಫ್ಲಾಸಿಸ್ ಲೋಬೋ ನೆಕ್ಸಾನ್ ಕಾರುಗಳ ವಿಶೇಷತೆಯನ್ನು ತಿಳಿಸಿದರು. ಅಟೋಮ್ಯಾಟ್ರಿಕ್ಸ್‌ನ ಸೇಲ್ಸ್ ಜನರಲ್ ಮ್ಯಾನೇಜರ್‌ಗಳಾದ ಪ್ರವೀಣ್ ಶೆಟ್ಟಿ ಹಾಗೂ ಪ್ರಮೋದ್ ಕುಮಾರ್ ಅತಿಥಿಗಳಿಗೆ ಹೂಗುಚ್ಚ ನೀಡಿ ಸ್ವಾಗತಿಸಿದರು. ಎಕ್ಸಿಕ್ಯೂಟಿವ್ ಗಿತೇಶ್ ಪಿ. ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಬಿಸಿರೋಡು ಶಾಖೆಯ ಟೀಮ್ ಲೀಡರ್ ಮನ್‌ದೀಪ್ ಕುಲಾಲ್ ಹಾಗೂ ಸಿಬಂದಿ ವರ್ಗ ಉಪಸ್ಥಿತರಿದ್ದರು.

ನೆಕ್ಸಾನ್ ಪ್ರಥಮ ಗ್ರಾಹಕರಿಗೆ ಕೀ ಹಸ್ತಾಂತರ
ನ್ಯೂ ನೆಕ್ಸಾನ್ ಪೆಟ್ರೋಲ್ ಮತ್ತು ನೆಕ್ಸಾನ್ ಇವಿ ಕಾರುಗಳನ್ನು ಖರೀದಿಸಿದ ಪ್ರಥಮ ಗ್ರಾಹಕರಿಗೆ ಕೀ ಹಸ್ತಾಂತರ ಮಾಡಲಾಯಿತು. ಸುದರ್ಶನ್ ಕೊಕ್ಕಡ, ಗೋಪಾಲಕೃಷ್ಣ, ಪ್ರವೀಣ್ ಕುಮಾರ್ ಎಸ್.ಎಸ್., ಗೋಪಿ ಎಮ್.ಜಿ., ಸ್ಮಿತಾ ಎಸ್.ಬಿ., ಜಿತೇಶ್ ಲಾರೆನ್ಸ್, ಸುಧೀರ್ ಶೆಟ್ಟಿ, ವೆಂಕಟ್ರಮಣ, ಶಿವಾನಂದ ಹಾಗೂ ಹೇಮಂತ್ ಎನ್.ಎಸ್.ರವರಿಗೆ ಸೇಲ್ಸ್ ಜನರಲ್ ಮ್ಯಾನೇಜರ್‌ಗಳಾದ ಪ್ರವೀಣ್ ಶೆಟ್ಟಿ ಹಾಗೂ ಪ್ರಮೋದ್ ಕುಮಾರ್ ಕೀ ಹಸ್ತಾಂತಿರಿಸದರು.

LEAVE A REPLY

Please enter your comment!
Please enter your name here