ಉಪ್ಪಿನಂಗಡಿ: ಹಿಟಾಚಿಗೆ ಜೀಪು ಡಿಕ್ಕಿ- ಐವರಿಗೆ ಗಾಯ

0

ಉಪ್ಪಿನಂಗಡಿ: ರಸ್ತೆ ಬದಿ ನಿಲ್ಲಿಸಿದ್ದ ಹಿಟಾಚಿಯೊಂದಕ್ಕೆ ಥಾರ್ ಜೀಪು ಡಿಕ್ಕಿಯಾಗಿ ಐವರು ಗಾಯಗೊಂಡ ಘಟನೆ ಪೆರ್ನೆ ಬಳಿಯ ಕಡಂಬು ಎಂಬಲ್ಲಿ ಸೆ.27ರ ರಾತ್ರಿ ನಡೆದಿದೆ.
ಪೆರ್ನೆ ಹಾಗೂ ಸತ್ತಿಕಲ್ಲ್ ಪರಿಸರದವರಾದ ನಝೀರ್ ಬಿ., ಮಹಮ್ಮದ್ ನಿಝಾಮುದ್ದೀನ್, ಮುಹಮ್ಮದ್ ಶಾಹೀರ್, ಅಬ್ದುಲ್ ಸಲೀಂ, ಜೀಪು ಚಾಲಕ ಮುಹಮ್ಮದ್ ಶಫೀಕ್ ಘಟನೆಯಿಂದ ಗಾಯಗೊಂಡವರು. ಇವರಲ್ಲಿ ನಾಲ್ವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿದರೆ, ಓರ್ವನನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜೀಪು ಚಾಲಕ ಜೀಪನ್ನು ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ ಮಣ್ಣು ರಸ್ತೆಯಲ್ಲಿ ನಿಂತಿದ್ದ ಹಿಟಾಚಿ ವಾಹನಕ್ಕೆ ಜೀಪು ಡಿಕ್ಕಿಯಾಗಿ ಮಗುಚಿ ಬಿದ್ದಿದೆ. ಇದರಿಂದ ಜೀಪು ನಜ್ಜುಗುಜ್ಜಾಗಿದೆ. ಇವರು ಸತ್ತಿಕಲ್ಲು ಕಡೆಗೆ ಪ್ರಯಾಣಿಸುತ್ತಿದ್ದರೆನ್ನಲಾಗಿದೆ. ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಫಾರೂಕ್ ಪೆರ್ನೆಯವರು ಇತರರೊಂದಿಗೆ ಸೇರಿಕೊಂಡು ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸುವಲ್ಲಿ ನೆರವಾದರು. ಈ ಬಗ್ಗೆ ಪುತ್ತೂರು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here