ಪುರುಷರಕಟ್ಟೆಯ ಹೋಟೆಲ್ ಉದಯಭಾಗ್ಯ ಮಾಲಕ ಸುರೇಶ್ ಪ್ರಭು ನಿಧನ

0

ಪುತ್ತೂರು: ಪುರುಷರಕಟ್ಟೆಯಲ್ಲಿರುವ ಉದಯಭಾಗ್ಯ ಹೊಟೇಲ್ ನ ಮ್ಹಾಲಕ ಪುರುಷರಕಟ್ಟೆ ನಿವಾಸಿ ಸುರೇಶ್ ಪ್ರಭು(65ವ.) ಅ.1ರಂದು ಮುಂಜಾನೆ ವೇಳೆ ಹೃದಯಾಘಾತದಿಂದ ನಿಧನರಾದರು.


ತನ್ನ ತಂದೆ ರಾಮಣ್ಣ ಪ್ರಭುರವರು ಪ್ರಾರಂಭಿಸಿದ್ದ ಹೊಟೇಲ್ ನಲ್ಲಿ ತನ್ನ 13 ನೇ ವಯಸ್ಸಿನಲ್ಲಿ ತೊಡಗಿಸಿಕೊಂಡಿದ್ದ ಸುರೇಶ್ ಪ್ರಭುರವರು ನಂತರ ನಿರಂತರವಾಗಿ ಹೊಟೇಲ್ ಉದ್ಯಮವನ್ನು ಮುಂದುವರಿಸಿ ಸುಮಾರು 52 ವರ್ಷಗಳ ಕಾಲ ಪುರುಷಕರಟ್ಟೆಯಲ್ಲಿ ಯಶಸ್ವಿ ಹೊಟೇಲ್ ಉದ್ಯಮಿಯಾಗಿ ಮುನ್ನಡೆಸಿದ್ದರು.
ಪುರುಷರಕಟ್ಟೆ ದಾಬೋಲಿ ಪೂರ್ಣಾನಂದ ಭಜನಾ ಮಂದಿರಕ್ಕೆ ಸ್ಥಳದಾನ ಮಾಡಿರುವ ಇವರು ಭಜನಾ ಮಂದಿರದ ಪ್ರಥಮ ಗೌರವಾಧ್ಯಕ್ಷರಾಗಿದ್ದರು. ಪುರುಷರಕಟ್ಟೆ ಮಹಾಲಿಂಗೇಶ್ವರ ದೇವರ ಕಟ್ಟೆಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
ಮೃತರು ಪತ್ನಿ ತಾರಾ ಸುರೇಶ್ ಪ್ರಭು ಪುತ್ರ ಹೊಟೇಲ್ ನಡೆಸುತ್ತಿರುವ ದೇವಿಕಿರಣ್, ಪುತ್ರಿಯರಾದ ಸುಜಾತಾ, ದೀಪಾ, ವಿದ್ಯಾ, ಸೊಸೆ, ಅಳಿಯಂದಿರು ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here