ಚೈತನ್ಯ ಮಿತ್ರ ವೃಂದದಿಂದ ಗಾಂಧಿ ಜಯಂತಿ

0

ಪುತ್ತೂರು: ಚೈತನ್ಯ ಮಿತ್ರ ವೃಂದ (ರಿ) ಪಡೀಲ್ ಪುತ್ತೂರು ಇದರ ವತಿಯಿಂದ ಮಹಾತ್ಮ ಗಾಂಧಿ ಜಯಂತಿ, ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಹಾಗೂ ಸಂಸ್ಥೆಯ ನೂತನ ಕಚೇರಿ ಯ ಪ್ರಥಮ ವರ್ಷಾಚರಣೆಯು ಅಧ್ಯಕ್ಷ ಆನಂದ್ ರವರ ಅಧ್ಯಕ್ಷತೆಯಲ್ಲಿ ಸಂಸ್ಥೆಯ ಕಚೇರಿಯಲ್ಲಿ ನಡೆಯಿತು. ಸಂಸ್ಥೆಯ ಮಾಜಿ ಅಧ್ಯಕ್ಷ ಶಿವರಾಮ ಗೌಡ ರವರು ದೀಪ ಬೆಳಗಿಸಿ, ಭಾರತ ಮಾತೆ ಹಾಗೂ ಮಹತ್ಮ ಗಾಂಧಿ ಭಾವಚಿತ್ರ ಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು. ಸಂಸ್ಥೆಯ ಸಂಚಾಲಕ ಸಂಪತ್ ಕುಮಾರ್ ಜೈನ್ ರವರು ಸಂದೇಶ ನೀಡಿದರು. ಕಾರ್ಯದರ್ಶಿ ಗಣೇಶ್ ಬದಿನಾರ್ ಸ್ವಾಗತಿಸಿ, ಉಪಾಧ್ಯಕ್ಷ ಗಣೇಶ್ ಬಿ ವಂದಿಸಿದರು. ಮಾಜಿ ಅಧ್ಯಕ್ಷ ಚಂದ್ರಶೇಖರ್ ಕೇಪುಳು ಕಾರ್ಯಕ್ರಮ ನಿರೂಪಿಸಿದರು. ನಿಕಟಪೂರ್ವ ಅಧ್ಯಕ್ಷ ಪುರಂದರ್ ಪಡೀಲ್, ಮಾಜಿ ಸಂಚಾಲಕ ಗಣೇಶ್ ಎನ್, ಅರುಣ್ ಕುಮಾರ್, ಸುಂದರ ಎಚ್, ಸುರೇಶ್ ರಾಜ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here