ಮೊಬೈಲ್ಸ್, ಲ್ಯಾಪ್ ಟಾಪ್, ಟ್ಯಾಬ್ ಎಕ್ಸ್ ಕ್ಲೂಸಿವ್ ಸರ್ವೀಸ್ ಸೆಂಟರ್ ಶ್ರೀಯಾ ಮೊಬೈಲ್ಸ್ ಶುಭಾರಂಭ

0

ಪುತ್ತೂರು : ಇಲ್ಲಿನ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ ಮುಂಭಾಗದಲ್ಲಿರುವ ಕೇಶವ ಶ್ರೀ ಶಾಪಿಂಗ್ ಸೆಂಟರಿನಲ್ಲಿ ಭರತ್ ಗೌಡ ಹಾಗೂ ಬಾಲಕೃಷ್ಣ ಬಂಗೇರ ಇವರ ಪಾಲುದಾರಿಕೆಯಲ್ಲಿ ಮಲ್ಟಿಬ್ರ್ಯಾಂಡ್ ಮೊಬೈಲ್ಸ್, ಲ್ಯಾಪ್ ಟಾಪ್ ಹಾಗೂ ಟ್ಯಾಬ್ಲೆಟ್ಸ್ ಇವುಗಳ ಅತ್ಯುತ್ತಮ ಸೇವಾ ಕೇಂದ್ರ ” ಶ್ರೀಯಾ ಮೊಬೈಲ್ಸ್” ಅ.6 ರಂದು ಶುಭಾರಂಭವಾಯಿತು.

ಶ್ರೀ ಮಹಾಲಿಂಗೇಶ್ವರ ದೇವಾಲಯದ ಪ್ರಧಾನ ಅರ್ಚಕ ವಸಂತ ಕೆದಿಲಾಯ ದೀಪ ಪ್ರಜ್ವಲನೆ ನೆರವೇರಿಸಿ, ಸಂಸ್ಥೆಯ ಶ್ರೇಯೋಭಿವೃಧ್ಧಿಗೆ ಹರಸಿದರು. ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕೆಡೆಂಜಿ , ಶ್ರೀ ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನ ಸಮಿತಿ ಸದಸ್ಯ ಶೇಖರ್ ನಾರಾವಿ , ಸಂಕೀರ್ಣದ ಪಾಲುದಾರರಾದ ಅಜಿತ್ ನಾಯಕ್ ಹಾಗೂ ಪ್ರಕಾಶ್ ನಾಯಕ್, ನಗರಸಭಾ ಸದಸ್ಯೆ ಮೋಹಿನಿ ವಿಶ್ವನಾಥ್, ನಗರಸಭಾ ಮಾಜಿ ಉಪಾಧ್ಯಕ್ಷ ವಿಶ್ವನಾಥ್ ಗೌಡ, ಸಂಸ್ಥೆಯ ಪಾಲುದಾರ ಭರತ್ ರವರ ತಂದೆ ಲಕ್ಷ್ಮಣ ಗೌಡ, ಚಿಕ್ಕಪ್ಪ ಕೇಶವ ಗೌಡ, ರೋಲ್ ಮಾರ್ಕ್ ಸ್ಟುಡಿಯೋ ಮಾಲೀಕ ವಸಂತ್ ನಾಯ್ಕ್, ಇನ್ನೋರ್ವ ಪಾಲುದಾರ ಬಾಲಕೃಷ್ಣ ಬಂಗೇರ, ಪತ್ನಿ ಸ್ವಾತಿ ಬಾಲಕೃಷ್ಣ ಮತ್ತು ಬೇಬಿ ಶ್ರೀಯಾ ಸಹಿತ ಹಲವರು ಹಾಜರಿದ್ದರು.

ಸೇವೆಗಳು – ಮಳಿಗೆಯಲ್ಲಿ ಎಲ್ಲಾ ಕಂಪನಿಯ ಮೊಬೈಲ್ಸ್ ದುರಸ್ಥಿ, ಬ್ರೋಕನ್ ಗ್ಲಾಸ್ ಮತ್ತು ಎಲ್.ಸಿ.ಡಿ.ರಿಪ್ಲೇಸ್ ಮೆಂಟ್, ಬ್ಯಾಟರಿ ಚೇಂಜ್, ವಾಟರ್ ಡ್ಯಾಮೇಜ್ ಹಾಗೂ ಫೋನ್ ಅನ್ಲಾಕ್ ಸೇವೆ, ನೆಟ್ ವರ್ಕ್ ಪ್ರಾಬ್ಲೆಮ್, ಡಾಟಾ ರಿಕವರಿ, ಚಿಪ್ ಲೆವೆಲ್ ಸರ್ವೀಸ್ ಹಾಗೂ ಇ.ಎಂ.ಎಂ.ಸಿ. ರಿಪ್ರೋಗ್ರಾಮಿಂಗ್ ಈ ಮೊದಲಾದ ಸೇವೆಗಳು ಸಂಸ್ಥೆಯಿಂದ ತ್ವರಿತ ರೀತಿಯಲ್ಲಿ ಲಭ್ಯವಿದ್ದು, ಗ್ರಾಹಕ ಜನತೆ ಇವೆಲ್ಲಾ ಸೇವೆಗಳ ಪ್ರಯೋಜನ ಪಡೆಯುವಂತೆ ಸಂಸ್ಥೆ ಪಾಲುದಾರರು ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here