ಅ.15ರಿಂದ ಕೋಡಿಂಬಾಡಿ ಮಠದಬೆಟ್ಟು ಶ್ರೀರಾಜರಾಜೇಶ್ವರಿ ದೇವಸ್ಥಾನದಲ್ಲಿ ಶರವನ್ನವರಾತ್ರಿ ಉತ್ಸವ, ಚಂಡಿಕಾ ಹೋಮ

0

ಪುತ್ತೂರು: ಕೋಡಿಂಬಾಡಿ ಮಠದಬೆಟ್ಟು ಶ್ರೀರಾಜರಾಜೇಶ್ವರಿ ದೇವಸ್ಥಾನದಲ್ಲಿ ಅ.15ರಿಂದ 24ರವರೆಗೆ ಕ್ಷೇತ್ರ ತಂತ್ರಿಗಳಾದ ಬ್ರಹ್ಮಶ್ರೀ ಪಾವಂಜೆ ವಾಗೀಶ ಶಾಸ್ತ್ರೀರವರ ಮಾರ್ಗದರ್ಶನದಲ್ಲಿ ಶರವನ್ನವರಾತ್ರಿ ಉತ್ಸವ ಮತ್ತು ಚಂಡಿಕಾ ಹೋಮ ನಡೆಯಲಿದೆ.


ಅ.15ರಂದು ಬೆಳಿಗ್ಗೆ 7ರಿಂದ ಗಣಪತಿ ಹೋಮ, ಚಂಡಿಕಾ ಹೋಮ, ಸ್ಯಾಕ್ಸೋಫೋನ್ ವಾದನ, ಭಕ್ತಿರಸಮಂಜರಿ, ಭಜನೆ, ಅ.16 ಮತ್ತು 17ರಂದು ಬೆಳಿಗ್ಗೆ 11ರಿಂದ ಭಜನೆ, ಚಂಡಿಕಾ ಹೋಮ, ಸಂಜೆ ಭಜನೆ, ಅ.18 ಮತ್ತು 19ರಂದು ಬೆಳಿಗ್ಗೆ, ಸಂಜೆ ಭಜನೆ, ಅ.20ರಂದು ಬೆಳಿಗ್ಗೆ ಭಜನೆ, ಸಂಜೆ ವೀಣಾ ವಾದನ, ಅ.21ರಂದು ಬೆಳಿಗ್ಗೆ ಭಜನೆ, ಸಂಜೆ ಭರತನಾಟ್ಯ, ಅ.22ರಂದು ಬೆಳಿಗ್ಗೆ 7ರಿಂದ ಚಂಡಿಕಾ ಹೋಮ, ಮಧ್ಯಾಹ್ನ ಭರತನಾಟ್ಯ, ಸಂಜೆ ಭಜನೆ, ಅ.23ರಂದು ಬೆಳಿಗ್ಗೆ ಭಜನೆ, ಸಂಜೆ ಭಜನೆ, ಅ.24ರಂದು ಬೆಳಿಗ್ಗೆ ಭಜನೆ, ಸಂಜೆ ಭಜನೆ ನಡೆಯಲಿದೆ ಎಂದು ಆಡಳಿತ ಮಂಡಳಿಯ ಅಧ್ಯಕ್ಷ ಟಿ.ಅಣ್ಣಪ್ಪಯ್ಯ ತೆಂಕಿಲ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here