ವಿದ್ಯಾಭಾರತಿ ರಾಷ್ಟ್ರೀಯ ಕಬಡ್ಡಿ- ಗಜಾನನ ಶಾಲೆ ಈಶ್ವರಮಂಗಲ ಎಸ್ ಜಿಎಫ್ ಐಗೆ ಆಯ್ಕೆ

0

ಪುತ್ತೂರು: ಉತ್ತರ ಪ್ರದೇಶದ ಫತೇಪುರದಲ್ಲಿ ನಡೆದ ವಿದ್ಯಾಭಾರತಿ ರಾಷ್ಟ್ರೀಯ ಕಬಡ್ಡಿ ಪಂದ್ಯಾಟದಲ್ಲಿ ಕಿಶೋರ್ ವರ್ಗದ ಬಾಲಕಿಯರ ತಂಡವನ್ನು ಕರ್ನಾಟಕ ರಾಜ್ಯದಿಂದ ಪ್ರತಿನಿಧಿಸಿದ್ದ ಈಶ್ವರಮಂಗಲ ಗಜಾನನ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯರು ಪ್ರಥಮ ಸ್ಥಾನದೊಂದಿಗೆ ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾಗೆ ಆಡಲು ಆಯ್ಕೆಯಾಗಿದ್ದಾರೆ.

ಈಶ್ವರಮಂಗಲದ ಅರುಣ್ ಕುಮಾರ್, ಲತಾ ದಂಪತಿಗಳ ಪುತ್ರಿ ಗ್ರೀಷ್ಮಾ, ಪೆರ್ಲಂಪಾಡಿ ಜನಾರ್ಧನ ಗೌಡ ಮತ್ತು ಲೀಲಾವತಿ ದಂಪತಿಗಳ ಪುತ್ರಿ ವೀಕ್ಷಾ, ಈಶ್ವರಮಂಗಲದ ಪರಮೇಶ್ವರ ಗೌಡ-ಶೋಭಾ ದಂಪತಿಗಳ ಪುತ್ರಿ ಶ್ರಾವ್ಯ ಗಜಾನನ ಶಾಲೆಯ ಕ್ರೀಡಾಪಟುಗಳಾಗಿದ್ದಾರೆ. ತಂಡವು ಅಂತಿಮ ಸ್ಪರ್ಧೆಯಲ್ಲಿ ರಾಜಸ್ಥಾನ ತಂಡವನ್ನು ಮಣಿಸುವ ಮೂಲಕ ಎಸ್ ಜಿಎಫ್ ಐ ಗೆ ಆಯ್ಕೆಯಾಗಿದೆ. ತಂಡದಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳನ್ನು ಶಾಲಾ ಆಡಳಿತ ಮಂಡಳಿ ಶಿಕ್ಷಕ ವರ್ಗ, ಸಿಬ್ಬಂದಿ ವರ್ಗ, ಪೋಷಕರು ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here