ಕೂವೆಮಠ ಶ್ರೀ ನರಸಿಂಹ ದೇವರ, ನಾಗದೇವರ ಪುನರ್ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕದ ಆಮಂತ್ರಣ ಪತ್ರ ಬಿಡುಗಡೆ

0

ನೆಲ್ಯಾಡಿ: 2024ರ ಫೆ.23ರಿಂದ 26ರ ತನಕ ನಡೆಯಲಿರುವ ಬಜತ್ತೂರು ಗ್ರಾಮದ ಒಡ್ಯಮೆ ಕೂವೆಮಠ(ಶಿವತ್ತಮಠ) ಸಪರಿವಾರ ಶ್ರೀ ನರಸಿಂಹ ದೇವರ ಹಾಗೂ ನಾಗದೇವರ ಪುನರ್ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ನ.6ರಂದು ಪುತ್ತೂರು ಶಾಸಕ ಅಶೋಕ್‌ಕುಮಾರ್ ರೈ ಕಚೇರಿಯಲ್ಲಿ ಬಿಡುಗಡೆಗೊಳಿಸಲಾಯಿತು.

ಶಾಸಕ ಅಶೋಕ್‌ ಕುಮಾರ್ ರೈ ಆಮಂತ್ರಣ ಪತ್ರ ಬಿಡುಗಡೆಗೊಳಿಸಿ ಶುಭಹಾರೈಸಿದರು. ಉಪ್ಪಿನಂಗಡಿಯ ದಂತ ವೈದ್ಯ ಡಾ.ರಾಜಾರಾಮ್ ಕೆ.ಬಿ., ಕೂವೆಮಠದ ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ರಾಧಾಕೃಷ್ಣ ಕೆ.ಎಸ್.ಕುವೆಚ್ಚಾರು, ಉಪಾಧ್ಯಕ್ಷರಾದ ಗುರುಪ್ರಸಾದ ರಾಮಕುಂಜ, ಮಹೇಂದ್ರವರ್ಮ ಮೇಲೂರು, ಪ್ರಧಾನ ಕಾರ್ಯದರ್ಶಿ ರಂಜಿತ್ ಜೈನ್ ಮೇಲೂರು, ಕಾರ್ಯದರ್ಶಿ ಚಂದ್ರಶೇಖರ ಶಿವತ್ತಮಠ, ಕೋಶಾಧಿಕಾರಿ ಶಾಂತಿಪ್ರಕಾಶ್ ಬರ್ನಜಾಲು, ಜೊತೆ ಕಾರ್ಯದರ್ಶಿ ಮಹೇಶ ಪಾತೃಮಾಡಿ, ಆನಂದ ಮೇಲೂರು, ವಿವಿಧ ಸಮಿತಿ ಸದಸ್ಯರಾದ ರಾಮಣ್ಣ ಶಿವತ್ತಮಠ, ಲಕ್ಷ್ಮಣ ಶಿವತ್ತಮಠ, ಆನಂದ ಶಿವತ್ತಮಠ, ಮೋನಪ್ಪ ಗೌಡ ಕುಲೆಮಾನ, ಪೂವಪ್ಪ ಗೌಡ ಒಡ್ಯಮೆ, ರುಕ್ಮಯ ಗೌಡ ಒಡ್ಯಮೆ, ರಾಮಣ್ಣ ಬಾಳೆಹಿತ್ತಿಲು, ಸತೀಶ್ ಮೇಲೂರು, ಪದ್ಮಯ ಗೌಡ ಡೆಂಬಲೆ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here