ಬೆಳಿಯೂರುಕಟ್ಟೆ ಕಾಲೇಜಿನಲ್ಲಿ ಬಾಲ್ಯ ವಿವಾಹ ಮುಕ್ತ ಕರ್ನಾಟಕದ ಆಂದೋಲನ ಮಾಹಿತಿ ಕಾರ್ಯಕ್ರಮ

0

ಪುತ್ತೂರು: ನ.9ರಂದು ಬೆಳಿಯೂರುಕಟ್ಟೆ ಸ.ಪ.ಪೂ ಕಾಲೇಜಿನಲ್ಲಿ ಬಾಲ್ಯ ವಿವಾಹ ಮುಕ್ತ ಕರ್ನಾಟಕದ ಆಂದೋಲನದ ಅಂಗವಾಗಿ ಸಂಸ್ಥೆಯ ಹಿರಿಯ ವಿದ್ಯಾರ್ಥಿ ಪುತ್ತೂರಿನ ಹರೀಶ್ ಕುಮಾರ್‌‌ ಬಾಳಕ್ಕ ಅವರಿಂದ ಮಾಹಿತಿ ಕಾರ್ಯಕ್ರಮ ನಡೆಸಲಾಯಿತು. ಕಾಲಕ್ಕೆ ಅನುಗುಣವಾಗಿ ಸರಕಾರದ ನಿಯಮಗಳು ಬದಲಾದಾಗ ಅದನ್ನು ಅನುಕರಣೆ ಮಾಡುವುದು ನಮ್ಮ ಜವಾಬ್ದಾರಿ. ಕೇಂದ್ರ ಸರಕಾರ ಈಗಾಗಲೇ ಹುಡುಗ ಹುಡುಗಿಯ ವಿವಾಹದ ವಯಸ್ಸನ್ನು 21 ವರ್ಷಕ್ಕೆ ಹೆಚ್ಚಿಸುವಂತೆ ಮಸೂದೆ ಪಾಸು ಮಾಡಿರುತ್ತದೆ ಎಂದು ತಿಳಿಸಿದರು. ಪ್ರಾಂಶುಪಾಲರಾದ ಹರಿಪ್ರಕಾಶ್‌ ಬೈಲಾಡಿ ಸ್ವಾಗತಿಸಿ ರವಿಕಲಾ ಟಿ. ವಂದಿಸಿದರು.

LEAVE A REPLY

Please enter your comment!
Please enter your name here