ಕೊಂಡಾಡಿಕೊಪ್ಪ ಅನಾರೋಗ್ಯದಲ್ಲಿರುವ ಕುಟುಂಬಕ್ಕೆ ನೇರವಾದ ನಂದಗೋಕುಲ ಟ್ರಸ್ಟ್

0

ಕಾಣಿಯೂರು: ನಂದಗೋಕುಲ ಟ್ರಸ್ಟ್ ಫಂಡ್ ವತಿಯಿಂದ, ಶ್ರೀ ಕ್ಷೇತ್ರ ದೈಪಿಲ ಕ್ರೀಡಾ ಸೇವಾ ಸಂಘದ ಸಹಾಯದಿಂದ ಶರವೂರು ಕೊಂಡಾಡಿಕೊಪ್ಪದಲ್ಲಿ ತುಂಬಾ ಅನಾರೋಗ್ಯದಲ್ಲಿರುವ ವೆಂಕಟೇಶ್ ಅವರ ಪತ್ನಿ ನಳಿನಿ ಎಂಬವರು ಪಾಶ್ವವಾಯುವಿಂದ ಬಳಲುತ್ತಿದ್ದು ಅವರ ಕುಟುಂಬಕ್ಕೆ 2000 ಲೀಟರ್ ಕುಡಿಯುವ ನೀರಿನ ಟ್ಯಾಂಕ್ ಮತ್ತು ಕುಡಿಯುವ ನೀರಿನ ವ್ಯವಸ್ಥೆ, ದಿನಸಿ ಸಾಮಗ್ರಿ ಮತ್ತು ಅವರ ಮಗಳು ಚೈತನ್ಯಳ ವಿದ್ಯಾಭ್ಯಾಸಕ್ಕಾಗಿ 26,000ರೂ ಗಳ ಹಣಕಾಸಿನ ಸಹಾಯ ಮಾಡಲಾಯಿತು.

ಸಂದರ್ಭದಲ್ಲಿ ನಂದಗೋಕುಲ ಟ್ರಸ್ಟ್ ನ ಅಧ್ಯಕ್ಷರಾದ ಕಾರ್ತಿಕ್ ಕೆ, ಕಾರ್ಯದರ್ಶಿ ಲಿಖಿತಾ ಕುಮಾರಿ, ಟ್ರಸ್ಟ್ ನ ಸದಸ್ಯರಾದ ಮೋಹನ್ ಕೆ ಪಿ, ನಾಗೇಶ್, ನವೀನ್ ಕೆ ಪಿ, ರವಿರಾಜ್, ಪವನ್, ಪ್ರಮೋದ್, ಅಮೃತ್,ಪ್ರಸಾದ್, ಮೋಹನ್ ಎಂ, ಅರುಣ್, ಕಾರ್ತಿಕ್ ಎಂ, ಯತಿನ್, ಶೃತಿ, ಸೌಮ್ಯ, ರಕ್ಷಾ, ಮತ್ತು ಶ್ರೀ ಕ್ಷೇತ್ರ ದೈಪಿಲ ಕ್ರೀಡಾ ಸೇವಾ ಸಂಘದ ಪ್ರಮುಖರಾದ ಪ್ರವೀಣ್ ಕುಂಟ್ಯಾನ, ಅಧ್ಯಕ್ಷ ರಾಜೇಶ್ ಖಂಡಿಗ, ಮತ್ತು ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here