ವಿವೇಕಾನಂದ ಕಾಲೇಜಿನ ವಿದ್ಯಾರ್ಥಿ ಯನ್ ನಿಹಾಲ್ ರಾಜ್ ಹೆಗ್ಡೆ ಗೆ ವಿವಿದೆಡೆ ಚಿನ್ನ, ಬೆಳ್ಳಿ ಪದಕ

0

ಪುತ್ತೂರು: ವಿವೇಕಾನಂದ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿ, ಕಬಕ ವಿದ್ಯಾಪುರ ನಿವಾಸಿ ಯನ್.ನಿಹಾಲ್ ರಾಜ್ ಹೆಗ್ಡೆರವರು ವಿವಿದೆಡೆ ನಡೆದ ಲಾಂಗ್ ಜಂಪ್, ತ್ರಿಪಲ್ ಜಂಪ್ ನಲ್ಲಿ ಚಿನ್ನ, ಬೆಳ್ಳಿ ಪದಕವನ್ನು ಪಡೆದುಕೊಂಡಿದ್ದಾರೆ.


ಅಖಿಲಾ ಭಾರತೀಯ ಶಿಕ್ಷಾ ಸಂಸ್ಥಾನ ವತಿಯಿಂದ ನಡೆಸಲ್ಪಡುವ ಕ್ರೀಡಾ ಕೂಟದಲ್ಲಿ ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಲಾಂಗ್ ಜಂಪ್, ತ್ರಿಪಲ್ ಜಂಪ್ ನಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ಇತ್ತೀಚೆಗೆ ಬಿಹಾರದಲ್ಲಿ ನಡೆದ ರಾಷ್ಟ್ರಮಟ್ಟದ ಕ್ರಿಡಾಕೂಟದಲ್ಲಿ ಲಾಂಗ್‌ಜಂಪ್, ತ್ರಿಪಲ್‌ಜಂಪ್ ನಲ್ಲಿ ಬೆಳ್ಳಿ ಪದಕವನ್ನು ಪಡೆದುಕೊಂಡಿದ್ದಾರೆ. ಇವರು ನೆಹರೂನಗರ ವಿವೇಕನಂದ ಕಾಲೇಜಿನ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಯಾಗಿದ್ದು, ಕಬಕ ವಿದ್ಯಾಪುರ ನಿವಾಸಿ ಬಿ.ನಾಗರಾಜ ಹೆಗ್ಡೆ, ಭಾನುಮತಿಯ ಪುತ್ರರಾಗಿದ್ದಾರೆ.

LEAVE A REPLY

Please enter your comment!
Please enter your name here