ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸಂಸ್ಕಾರ ಶಿಬಿರದ ಸಮಾರೋಪ ಕಾರ್ಯಕ್ರಮ

0

ಆಲಂಕಾರು: ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವೆಂಬರ್ 2022ರಿಂದ ನವೆಂಬರ್ 2023ರ ತನಕ ನಡೆದ ಒಂದು ವರ್ಷದ ಸಂಸ್ಕಾರ ಶಿಬಿರದ ಸಮಾರೋಪ ಕಾರ್ಯಕ್ರಮ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು. ಒಂದು ವರ್ಷದ ಸಂಸ್ಕಾರ ಶಿಬಿರದಲ್ಲಿ ಪ್ರತಿ ಭಾನುವಾರ ಯೋಗ, ಭಜನೆ, ವೇದ, ಉಪನಿಷತ್, ಪುರಾಣಗಳ ಮಾಹಿತಿ, ಜಾನಪದ ಹಾಗೂ ಸಂಸ್ಕೃತಿಕ ಕಾರ್ಯಕ್ರಮಗಳ ಮಾಹಿತಿಯನ್ನು ಬೇರೆ ಬೇರೆ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿಯನ್ನು ನೀಡಲಾಗಿತ್ತು. ಸಮಾರೋಪ ಕಾರ್ಯಕ್ರಮದಲ್ಲಿ ಸಂಸ್ಕಾರ ಶಿಬಿರದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ದೇವಸ್ಥಾನದ ವತಿಯಿಂದ ಪ್ರಮಾಣ ಪತ್ರ ನೀಡಲಾಯಿತು. ಶಿಬಿರದ ಸಂಯೋಜಕರು ಹಾಗೂ ಮುಖ್ಯಸ್ಥರಾದ ಕೊಂಡಾಡಿಕೊಪ್ಪ ಶಾಲೆಯ ಮುಖ್ಯಗುರುಗಳಾದ ಜಯಂತ ವೈ ಸಂಪನ್ಮೂಲ ವ್ಯಕ್ತಿಗಳಾದ ರೇವತಿ ಕುದ್ಮಾರು, ದಿವ್ಯಾ ಮಾತಾಜಿ ಮನವಳಿಕೆ, ಯೋಗ ಗುರುಗಳಾದ ಸಂತೋಷ್ ಪೆರಿಯಡ್ಕರವರನ್ನು ದೇವಸ್ಥಾನದ ವತಿಯಿಂದ ಗೌರವಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ದಾಮೋದರ ಗೌಡ ಕಕ್ವೆ ವಹಿಸಿದರು,ಮುಖ್ಯ ಅತಿಥಿಗಳಾಗಿ ಮುಖ್ಯ ಗುರುಗಳಾದ ಪ್ರದೀಪ್ ಬಾಕಿಲ ಭಾಗವಹಿಸಿ ವಿದ್ಯಾರ್ಥಿಗಳಿಗೆ,ಶಿಬಿರದ ಆಯೋಜಕರಿಗೆ ಶುಭ ಹಾರೈಸಿದರು. ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಲಕ್ಷ್ಮೀ ನಾರಾಯಣ ಅಡೀಲು ಕಾರ್ಯಕ್ರಮ ನಿರೂಪಿಸಿ ಶೀನಪ್ಪ ಕುಂಬಾರ ಧನ್ಯವಾದ ಸಮರ್ಪಿಸಿದರು. ಬಾಬು ಮರುವಂತಿಲ ಅವರು ಸಹಕರಿಸಿದರು. ದೇವಸ್ಥಾನದ ಸಿಬ್ಬಂದಿಗಳು ಸಹಕರಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here