ಕುಂಬ್ರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ-ಸಜಂಕಾಡಿ ಸ.ಹಿ.ಪ್ರಾ.ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ

0

ಪುತ್ತೂರು: ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ ಪುತ್ತೂರು ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು ,ಸಮೂಹ ಸಂಪನ್ಮೂಲ ಕೇಂದ್ರ ಕುಂಬ್ರ ಇದರ ಆಶ್ರಯದಲ್ಲಿ ಪಟ್ಟೆ ಶ್ರೀಕೃಷ್ಣ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ 2023-24 ನೇ ಸಾಲಿನ ಕುಂಬ್ರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ ಯಲ್ಲಿ ಸಜಂಕಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 6ನೇ ತರಗತಿಯ ಮಹಮ್ಮದ್ ಹಿಶಾಮ್ ಆಶುಭಾಷಣದಲ್ಲಿ ಪ್ರಥಮ ,೩ನೇ ತರಗತಿಯ ಫಾತಿಮತ್ತ್ ಅಫೀಪ ಧಾರ್ಮಿಕ ಫಠಣ ಅರೇಬಿಕ್ ನಲ್ಲಿ ಪ್ರಥಮ ,4ನೇ ತರಗತಿಯ ಫಾತಿಮತ್ ಪಾಝಿಲ ಇಂಗ್ಲೀಷ್ ಕಂಠಪಾಠ ಸ್ಪರ್ಧೆ ಯಲ್ಲಿ ಪ್ರಥಮ ,5ನೇ ತರಗತಿಯ ಜೈಪ್ರೀತ್ ಮಿಮಿಕ್ರಿ ಯಲ್ಲಿ ಪ್ರಥಮ ,5ನೇ ತರಗತಿಯ ಆಶಿಷತ್ ಶಿಮಾ ಅಭಿನಯ ಗೀತೆಯಲ್ಲಿ ದ್ವಿತೀಯ ,6ನೇ ತರಗತಿಯ ಕೆ .ಮೂಸಾ ಆಸಫ್ ಲಘುಸಂಗೀತದಲ್ಲಿ ದ್ವಿತೀಯ ಸ್ಥಾನ ಪಡೆಕೊಂಡಿದ್ದಾರೆ. ಶಾಲೆಯ 4 ಮಂದಿ ಕ್ಲಸ್ಟರ್ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here