![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
![](https://puttur.suddinews.com/wp-content/uploads/2023/11/images-7.jpg)
ಉಪ್ಪಿನಂಗಡಿ: ಉಪ್ಪಿನಂಗಡಿ-ಗುರುವಾಯನಕೆರೆ ರಾಜ್ಯ ಹೆದ್ದಾರಿಯ ಕಣಿಯೂರು ಗ್ರಾಮದ ಮಾವಿನಕಟ್ಟೆ ಎಂಬಲ್ಲಿ ಆಕ್ಟಿವಾ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಮೂವರು ಗಾಯಗೊಂಡಿರುವ ಘಟನೆ ನ.15ರಂದು ಮಧ್ಯಾಹ್ನ ನಡೆದಿದೆ.
ಆಕ್ಟಿವಾ ಸವಾರ ಹಿರೇಬಂಡಾಡಿ ಗ್ರಾಮದ ನೂಜಿ ನಿವಾಸಿ ಜಯಪ್ರಕಾಶ್ ಆಚಾರ್ಯ(37ವ.), ಸಹಸವಾರೆ ಅವರ ಪತ್ನಿ ಆಶಾಗೀತಾ ಹಾಗೂ ಮಗ ಅದ್ವೀಶ್(2ವ.)ಎಂಬವರು ಗಾಯಗೊಂಡಿದ್ದಾರೆ. ಜಯಪ್ರಕಾಶ್ರವರು ತನ್ನ ಆಕ್ಟಿವಾ(ಕೆಎ 21 ಎಕ್ಸ್ 6143)ದಲ್ಲಿ ಪತ್ನಿ ಹಾಗೂ ಮಗನೊಂದಿಗೆ ಉಪ್ಪಿನಂಗಡಿಯಿಂದ ಗುರುವಾಯನಕೆರೆ ಕಡೆಗೆ ಹೋಗುತ್ತಿದ್ದ ವೇಳೆ ಯಶೋಧರ ಎಂಬವರು ಗುರುವಾಯನಕೆರೆ ಕಡೆಯಿಂದ ಉಪ್ಪಿನಂಗಡಿಗೆ ಚಲಾಯಿಸಿಕೊಂಡು ಬರುತ್ತಿದ್ದ ಬೈಕ್(ಕೆಎ19, ಹೆಚ್ಎಫ್ 3983) ನಡುವೆ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಜಯಪ್ರಕಾಶ ಆಚಾರ್ಯ, ಅವರ ಪತ್ನಿ ಆಶಾಗೀತಾ ಹಾಗೂ ಮಗ ಅದ್ವೀಶ್ ಆಕ್ಟಿವಾ ಸಹಿತ ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಈ ಬಗ್ಗೆ ಜಯಪ್ರಕಾಶ್ ಆಚಾರ್ಯರವರು ನೀಡಿದ ದೂರಿನಂತೆ ಪುತ್ತೂರು ಸಂಚಾರ ಠಾಣೆಯಲ್ಲಿ ಕಲಂ: 279,337 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.