ಈಶ್ವರಮಂಗಲ: ಉರೂಸ್ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

0

ಈಶ್ವರಮಂಗಲ ಮಖಾಂ ಉರೂಸ್ 2024 ಜನವರಿ 15 ರಿಂದ 21ರ ತನಕ ನಡೆಯಲಿದ್ದು ಜ.15ರಂದು ನವೀಕೃತ ಮಖಾಂ ಕಟ್ಟಡ ಉದ್ಘಾಟನೆ ಕೂಡಾ ನಡೆಯಲಿದೆ.
ಆ ಪ್ರಯುಕ್ತ ಉರೂಸ್ ಸಮಿತಿ ರಚಿಸಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಜಮಾಅತ್ ಕಮಿಟಿ ಅಧ್ಯಕ್ಷ ಅಬ್ದುಲ್ ಖಾದರ್ ಹಾಜಿ ಟಿ.ಎ ಅಧ್ಯಕ್ಷತೆ ವಹಿಸಿದ್ದರು. ಜಮಾಅತ್ ಕಮಿಟಿ ಸದಸ್ಯರು ಉಪಸ್ಥಿತರಿದ್ದರು. ಸ್ಥಳೀಯ ಖತೀಬ್ ಸಯ್ಯದ್ ಜಲಾಲುದ್ದೀನ್ ತಂಙಳ್ ಅಲ್ ಬುಖಾರಿ ಪ್ರಾರ್ಥನೆ ನೆರವೇರಿಸಿದರು.
ಉರೂಸ್ ಸಮಿತಿ ಗೌರವಾಧ್ಯಕ್ಷರಾಗಿ ಅಬ್ದುಲ್ ರಹಿಮಾನ್ ಹಾಜಿ ಮೇನಾಲ, ಅಧ್ಯಕ್ಷರಾಗಿ ಟಿ ಎ ಮುಹಮ್ಮದ್, ಉಪಾಧ್ಯಕ್ಷರಾಗಿ ಹಾರಿಸ್ ಪಿ ಯಸ್ ಹಾಗೂ
ಅಬ್ದುಲ್ಲ ಕುಂಞಿ ಕೆ ಝೆಡ್, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಸಲಾಮ್ ಎಂ ಎ ಆಯ್ಕೆಯಾದರು.
ಕಾರ್ಯದರ್ಶಿಗಳಾಗಿ ಅಬ್ದುಲ್ಲತೀಫ್ ಅಬ್ಬು ಎ ಎಚ್, ಝುಬೈರ್, ಉಮರ್ ಬಿ ಸಿ, ಯೂನುಸ್ ಪಟ್ರೋಡಿ, ಶಿಯಾಬ್ ಬಿ ಸಿ ಆಯ್ಕೆಯಾದರು.
ಕೋಶಾಧಿಕಾರಿಯಾಗಿ ರಹ್ಮಾನ್ ಮೇನಾಲ, ಸಂಚಾಲಕರಾಗಿ ಸವಾದ್ ಯು ಎಂ, ಮುಸ್ತಫ ಮಿನಿ, ತ್ವಾಹ ಅಕ್ಕು ಬಿ ಸಿ, ಮುಹಮ್ಮದ್ ಎಸ್ ಯಂ ಆಯ್ಕೆಯಾದರು.
ಸಲಹಾ ಸಮಿತಿ ಸದಸ್ಯರುಗಳಾಗಿ ಮುಹಮ್ಮದ್ ಹಾಜಿ ತಲೆಬೈಲ್, ಅಬ್ದುಲ್ ಖಾದರ್ ಹಾಜಿ ಟಿ ಎ, ಹಮೀದ್ ಹಾಜಿ ನೆಟ್ಟಣಿಗೆ, ಇ ಪಿ ಮುಹಮ್ಮದ್ ಹಾಜಿ
ಇಬ್ರಾಹಿಂ ಹಾಜಿ ತಲೆಬೈಲ್, ಕೆ ಎಂ ಮುಹಮ್ಮದ್, ಇ ಎ ಮುಹಮ್ಮದ್ ಕುಂಞಿ, ಇ ಎಚ್ ಅಬ್ಬಾಸ್, ಇ ಎಚ್ ಅಬ್ದುಲ್ ಖಾದರ್, ಎಂ ಎ ಖಾಲಿದ್ ಮೀನಾವು ಸೂಫಿ ಅಬ್ದುಲ್ ಖಾದರ್ ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here