ಭಗವದ್ಗೀತಾ ಸ್ಪರ್ಧೆ – ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಗೆ ಪ್ರಶಸ್ತಿ

0

ಪುತ್ತೂರು:ಮಂಗಳೂರು ಸಂಸ್ಕೃತ ಸಂಘ , ಶ್ರೀ ಭಗವದ್ಗೀತಾ ಅಭಿಯಾನ ಸಮಿತಿ, ದ.ಕ ಜಿಲ್ಲೆ, ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ, ಶಿರಸಿ, ಮತ್ತು ಸರಸ್ವತಿ ವಿದ್ಯಾಕೇಂದ್ರ, ನರಿಮೊಗರು ಪುತ್ತೂರು ಇವರ ಸಂಯುಕ್ತ ಆಶ್ರಯದಲ್ಲಿ ಗೀತಾಜಯಂತಿ ಅಂಗವಾಗಿ ನಡೆದ ಶ್ರೀಮದ್ ಭಗವದ್ಗೀತಾ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. 1 ಮತ್ತು 2ನೇ ತರಗತಿ ವಿಭಾಗ ಕಂಠಪಾಠದಲ್ಲಿ ಸನ್ಮಯ ಭಟ್ ಪ್ರಥಮ, ಕೀರ್ತನ್ ಪಿ ಯು ದ್ವಿತೀಯ, 5ರಿಂದ 7ನೇ ತರಗತಿ ವಿಭಾಗ ಕಂಠಪಾಠದಲ್ಲಿ ಮುಕುಂದ ಪ್ರಥಮ, ಶ್ರೀಕೃಷ್ಣ ದ್ವಿತೀಯ, ಭಾಷಣ ಸ್ಪರ್ಧೆಯಲ್ಲಿ – ಪ್ರಣತಿ ಬಂಗಾರಕೋಡಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here